social_icon

ಊಹಾಪೋಹಗಳಿಗೆ ತೆರೆ ಎಳೆದ ರಾಮ್ ಚರಣ್, ಉಪಾಸನಾ: ನಮ್ಮ ಮಗು ಭಾರತದಲ್ಲಿ ಜನಿಸಲಿದೆ ಎಂದ ತಾರಾ ದಂಪತಿ!

ಊಹಾಪೋಹಗಳಿಗೆ ವ್ಯತಿರಿಕ್ತವಾಗಿ, ರಾಮ್ ಚರಣ್ ಮತ್ತು ಅವರ ಉದ್ಯಮಿ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಭಾರತದಲ್ಲಿಯೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ತಮ್ಮ ಮೊದಲ ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಉಪಾಸನಾ ಸ್ಪಷ್ಟನೆ ನೀಡಿದ್ದಾರೆ.

Published: 28th February 2023 03:35 PM  |   Last Updated: 28th February 2023 07:07 PM   |  A+A-


Ram Charan - Upasana

ರಾಮ್ ಚರಣ್ - ಉಪಾಸನಾ

Posted By : Ramyashree GN
Source : IANS

ಹೈದರಾಬಾದ್: ಊಹಾಪೋಹಗಳಿಗೆ ವ್ಯತಿರಿಕ್ತವಾಗಿ, ರಾಮ್ ಚರಣ್ ಮತ್ತು ಅವರ ಉದ್ಯಮಿ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಭಾರತದಲ್ಲಿಯೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ತಮ್ಮ ಮೊದಲ ಮಗು ಅಮೆರಿಕದಲ್ಲಿ ಜನಿಸಲಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಉಪಾಸನಾ ಸ್ಪಷ್ಟನೆ ನೀಡಿದ್ದಾರೆ.

ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ 2022 ರ ಡಿಸೆಂಬರ್‌ನಲ್ಲಿ ಘೋಷಿಸಿದ್ದರು. ಅಪೋಲೋ ಆಸ್ಪತ್ರೆಗಳಲ್ಲಿ ಸಿಎಸ್‌ಆರ್‌ನ ಉಪಾಧ್ಯಕ್ಷರೂ ಆಗಿರುವ ಉಪಾಸನಾ, ತಮಗೆ ವರ್ಷಗಳಿಂದ ತಿಳಿದಿರುವ ಆಸ್ಪತ್ರೆಯ ಸಿಬ್ಬಂದಿಯಿಂದಲೇ ತನ್ನ ತಾಯ್ನಾಡಿನಲ್ಲಿ ಹೆರಿಗೆ ಮಾಡಿಸಲು ಉತ್ಸುಕರಾಗಿದ್ದಾರೆ.

ಜನಪ್ರಿಯ ಸುದ್ದಿ ಕಾರ್ಯಕ್ರಮ 'ಗುಡ್ ಮಾರ್ನಿಂಗ್ ಅಮೆರಿಕಾ'ದಲ್ಲಿ ರಾಮ್ ಚರಣ್ ಕಾಣಿಸಿಕೊಂಡ ನಂತರ ಈ ಊಹಾಪೋಹಗಳು ಹುಟ್ಟಿಕೊಂಡಿದ್ದವು. ದಂಪತಿ ತಮ್ಮ ಚೊಚ್ಚಲ ಮಗುವನ್ನು ಯುಎಸ್‌ನಲ್ಲಿ ಸ್ವಾಗತಿಸಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ತಮ್ಮ ಹೆರಿಗೆ ಭಾರತದಲ್ಲಿಯೇ ನಡೆಯಲಿದೆ ಎಂದು ಉಪಾಸನಾ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 10 ವರ್ಷಗಳ ಕಾಯುವಿಕೆ ಅಂತ್ಯ: ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಮ್ ಚರಣ್-ಉಪಾಸನಾ ದಂಪತಿ!

'ನಮ್ಮ ತಾಯ್ನಾಡಿನಲ್ಲಿ- ಭಾರತದಲ್ಲಿ ನಮ್ಮ ಮೊದಲ ಮಗುವನ್ನು ಹೆರಿಗೆ ಮಾಡಿಸಲು ನಾನು ರೋಮಾಂಚನಗೊಂಡಿದ್ದೇನೆ. ಡಾ. ಸುಮನಾ ಮನೋಹರ್, ಡಾ. ರೂಮಾ ಸಿನ್ಹಾ ಮತ್ತು ಈಗ ಗುಡ್ ಮಾರ್ನಿಂಗ್ ಅಮೇರಿಕಾ ಶೋನಿಂದ ಡಾ ಜೆನ್ನಿಫರ್ ಆಶ್ಟನ್ ಸೇರಿದಂತೆ ಅಪೋಲೋ ಆಸ್ಪತ್ರೆಗಳಲ್ಲಿ ವಿಶ್ವ ದರ್ಜೆಯ ವೈದ್ಯಕೀಯ OB/GYN ತಂಡವು ಲಭ್ಯವಿದೆ. ಈ ಪ್ರಯಾಣವು ನಮಗೆ ಅನೇಕ ರೋಮಾಂಚಕಾರಿ ಅನುಭವಗಳನ್ನು ನೀಡುತ್ತಿದೆ ಮತ್ತು ನಾವು ನಮ್ಮ ಜೀವನದಲ್ಲಿ ಈ ಹೊಸ ಹಂತವನ್ನು ಬಹಳ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದೇವೆ' ಎಂದು ಉಪಾಸನಾ ಹೇಳಿದ್ದಾರೆ.

ಅಪೊಲೊ ಆಸ್ಪತ್ರೆಗಳಲ್ಲಿ, OB/GYN ತಂಡವು ಡಾ. ಸುಮನಾ ಮನೋಹರ್ ಮತ್ತು ಡಾ ರೂಮಾ ಸಿನ್ಹಾ ಅವರನ್ನು ಒಳಗೊಂಡಿರುತ್ತದೆ. ಅಲ್ಲದೆ, ಬೋರ್ಡ್-ಪ್ರಮಾಣೀಕೃತ ಒಬ್-ಜಿನ್, ಲೇಖಕ ಮತ್ತು ಯುಎಸ್‌ನ ಟಿವಿ ವೈದ್ಯಕೀಯ ವರದಿಗಾರ ಡಾ ಜೆನ್ನಿಫರ್ ಆಶ್ಟನ್ ಕೂಡ ದಂಪತಿಯ ಮಗುವನ್ನು ಹೆರಿಗೆ ಮಾಡಿಸುವ ತಂಡದ ಭಾಗವಾಗಲಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp