'ದೂರದರ್ಶನ' ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಕಂಟೆಂಟ್ ಹೊಂದಿದೆ: ಸುಕೇಶ್ ಶೆಟ್ಟಿ
ದೂರದರ್ಶನವು 80 ಮತ್ತು 90 ರ ದಶಕದಲ್ಲಿ ಒಂದು ರೋಮಾಂಚಕಾರಿ ಅನುಭವವಾಗಿತ್ತು, ಮತ್ತು ಆ ದಿನಗಳನ್ನು ಇಂದಿಗೂ ನೆನಪಿಸಿಕೊಳ್ಳುವ ಮತ್ತು ಅದನ್ನು ಮಿಸ್ ಮಾಡಿಕೊಳ್ಳುವವರನ್ನು 'ದೂರದರ್ಶನ' ಭಾವನಾತ್ಮಕ ರೈಡ್ಗೆ ಕರೆದೊಯ್ಯಲು ಸಜ್ಜಾಗಿದೆ. ಹಳ್ಳಿ ಸೊಗಡಿನಿಂದ ನಮ್ಮನ್ನು ಮಂತ್ರಮುಗ್ಧರನ್ನಾಗಿಸಲು ಸಿದ್ಧವಾಗಿರುವ ಚಿತ್ರದ ಟೀಸರ್ ಈಗಾಗಲೇ ಹೊರಬಿದ್ದಿದೆ.
ಪೃಥ್ವಿ ಅಂಬರ್ ಮತ್ತು ಅಯನಾ ಅಭಿನಯದ 'ದೂರದರ್ಶನ' ಸಿನಿಮಾದ ಕಥೆಯನ್ನು ಬರೆದಿರುವ ಸುಕೇಶ್, ಇದು ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಚಿತ್ರವಾಗಲಿದೆ ಎಂದು ಹೇಳುತ್ತಾರೆ. 'ಒಂದು ಹಳ್ಳಿಯಲ್ಲಿ ಟಿವಿ ಬಂದ ನಂತರ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಮತ್ತು ಇದು ಹಾಸ್ಯ ಆಧಾರಿತ ನಾಟಕವಾಗಿದೆ' ಎಂದು ಹೇಳುತ್ತಾರೆ.
ಚಿತ್ರದ ತಾರಾಬಳಗದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಣಜೆ, ರಘು ರಾಮನಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಇದ್ದಾರೆ. ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ನಲ್ಲಿ ಚಿತ್ರತಂಡ ನಿರತವಾಗಿದ್ದು, ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ