70ನೇ ವಯಸ್ಸಿನಲ್ಲಿ ಹೀರೋ ಆದ ವೈಜನಾಥ್ ಬಿರಾದಾರ್ ನಟನೆಯ '90 ಬಿಡಿ ಮನೀಗ್ ನಡಿ' ಶೀಘ್ರದಲ್ಲೇ ಬಿಡುಗಡೆ

ಮದ್ಯದ ದುಷ್ಪರಿಣಾಮಗಳ ಕುರಿತು ಗಾಂಧೀಜಿಯವರ ಮಾತುಗಳಿಂದ ಪ್ರೇರಿತರಾದ ನಿರ್ದೇಶಕರಾದ ನಾಗರಾಜ್ ಅರೆಹೊಳೆ ಮತ್ತು ಉಮೇಶ್ ಬಾದರದಿನ್ನಿ ತಮ್ಮ ಮುಂಬರುವ ಚಿತ್ರ '90 ಬಿಡಿ ಮನೀಗ್ ನಡಿ' ಬಿಡುಗಡೆಗೆ ಸಿದ್ಧವಾಗಿದೆ. 
ವೈಜನಾಥ್ ಬಿರಾದಾರ್
ವೈಜನಾಥ್ ಬಿರಾದಾರ್
Updated on

ಮದ್ಯದ ದುಷ್ಪರಿಣಾಮಗಳ ಕುರಿತು ಗಾಂಧೀಜಿಯವರ ಮಾತುಗಳಿಂದ ಪ್ರೇರಿತರಾದ ನಿರ್ದೇಶಕರಾದ ನಾಗರಾಜ್ ಅರೆಹೊಳೆ ಮತ್ತು ಉಮೇಶ್ ಬಾದರದಿನ್ನಿ ತಮ್ಮ ಮುಂಬರುವ ಚಿತ್ರ '90 ಬಿಡಿ ಮನೀಗ್ ನಡಿ' ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ವೈಜನಾಥ್ ಬಿರಾದಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅವರ 70 ನೇ ವಯಸ್ಸಿನಲ್ಲಿ ಹೀರೋ ಆಗಿ ನಟಿಸಿರುವ ಮೊದಲ ಕಮರ್ಷಿಯಲ್ ಚಿತ್ರವಾಗಿದೆ.

'ಕನಸೆಂಬೋ ಕುದುರೆಯನೇರಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾದ ಹಿರಿಯ ನಟ ಬಿರಾದಾರ್ ಅವರು ಅಂತರರಾಷ್ಟ್ರೀಯ ಮನ್ನಣೆ ಮತ್ತು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

90 ಬಿಡಿ ಮನೀಗ್ ನಡಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೋಮವಾರ ಬಿಡುಗಡೆಯಾದ ಟೈಟಲ್ ಟ್ರ್ಯಾಕ್ ಅನ್ನು ಕಿರಣ್ ಶಂಕರ್ ಸಂಯೋಜಿಸಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಮತ್ತು ರಾಜೇಶ್ ಕೃಷ್ಣನ್ ಅವರ ಗಾಯನವಿದೆ.

ತಿಂಗಳಾಂತ್ಯದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿ ಹೊಂದಿದ್ದು, ಜೂನ್ 17 ರಂದು ಟ್ರೇಲರ್ ಅನ್ನು ಅನಾವರಣಗೊಳಿಸಲು ಚಿತ್ರತಂಡ ಯೋಜಿಸಿದೆ.

ಉತ್ತರ ಕರ್ನಾಟಕದ ಹಳ್ಳಿಯ ಹಿನ್ನೆಲೆಯಲ್ಲಿ ಮೂಡಿಬರುವ '90 ಬಿಡಿ ಮನೀಗ್ ನಡಿ' ಸಿನಿಮಾ ಒಂದು ಕಾಮಿಡಿ-ಕ್ರೈಮ್ ಥ್ರಿಲ್ಲರ್ ಆಗಿದ್ದು, ಅದು ಮದ್ಯ ಸೇವನೆ ಮತ್ತು ಜೂಜಾಟದ ಪರಿಣಾಮದ ಸುತ್ತ ಸುತ್ತುತ್ತದೆ. 

ಚಿತ್ರದಲ್ಲಿ ಕರಿ ಸುಬ್ಬು, ಪ್ರಶಾಂತ್ ಸಿದ್ದಿ, ನೀತಾ ಮೈಂದರಗಿ ಮತ್ತು ಪ್ರೀತು ಪೂಜಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೀರ್ ಸಮರ್ಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com