ಹೊಸಬರು ನಟಿಸಿರುವ 'ಧೀರ ಸಾಮ್ರಾಟ್‌'ಗೆ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್

ಹೊಸಬರಾದ ರಾಕೇಶ್ ಬಿರಾದಾರ್ ಮತ್ತು ನಟಿ ಅದ್ವಿತಿ ಶೆಟ್ಟಿ ಅಭಿನಯದ ಮುಂಬರುವ ಚಿತ್ರ 'ಧೀರ ಸಾಮ್ರಾಟ್' ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ, ಚಿತ್ರದ ‘ಏನ್ ಚಂದ ಕಾಣಿಸ್ತಾವ್ಳೆ’ ಎಂಬ ಹಾಡನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದರು. ಚಿತ್ರತಂಡಕ್ಕೆ ಶುಭಕೋರಿದರು. 
ಧೀರ ಸಾಮ್ರಾಟ್ ಚಿತ್ರತಂಡದೊಂದಿಗೆ ನಟ ಧ್ರುವ ಸರ್ಜಾ
ಧೀರ ಸಾಮ್ರಾಟ್ ಚಿತ್ರತಂಡದೊಂದಿಗೆ ನಟ ಧ್ರುವ ಸರ್ಜಾ

ಹೊಸಬರಾದ ರಾಕೇಶ್ ಬಿರಾದಾರ್ ಮತ್ತು ನಟಿ ಅದ್ವಿತಿ ಶೆಟ್ಟಿ ಅಭಿನಯದ ಮುಂಬರುವ ಚಿತ್ರ 'ಧೀರ ಸಾಮ್ರಾಟ್' ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ, ಚಿತ್ರದ ‘ಏನ್ ಚಂದ ಕಾಣಿಸ್ತಾವ್ಳೆ’ ಎಂಬ ಹಾಡಿನ ಅನಾವರಣ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಹಾಡನ್ನು ಬಿಡುಗಡೆ ಮಾಡಿದರು. ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ರಾಘವ್ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ.

ಈ ಚಿತ್ರವನ್ನು ಪಚ್ಚಿ ಎಂದೂ ಕರೆಯಲ್ಪಡುವ ಪವನ್ ಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಅವರು ಈ ಹಿಂದೆ 15 ವರ್ಷಗಳ ಕಾಲ ನಿರೂಪಕರಾಗಿ ಮತ್ತು ಕಾರ್ಯಕ್ರಮ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಗೂ ಅವರು ಕೊಡುಗೆ ನೀಡಿದ್ದಾರೆ ಮತ್ತು ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಧ್ರುವಸರ್ಜಾ, ಚಿತ್ರವನ್ನು ತಮ್ಮ ಸಹೋದರ ದಿವಂಗತ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ದಿನಾಂಕವನ್ನು ಮುಂದೂಡಲಾಗಿದೆ. ಚಿತ್ರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಉದ್ಯಮಕ್ಕೆ ಹೊಸಬರು. ಪಚ್ಚಿ ಅವರು ಪ್ರೋಗ್ರಾಮರ್ ಆಗಿದ್ದಾಗ ಅದ್ಧೂರಿ ಚಿತ್ರದ ಶೀರ್ಷಿಕೆ ಗೀತೆಯನ್ನು ಪ್ರಚಾರ ಮಾಡಲು ನನಗೆ ಸಹಾಯ ಮಾಡಿದ್ದರು ಮತ್ತು ನಾನು ಅವರ ಬೆಂಬಲಕ್ಕೆ ನಿಲ್ಲುವ ಸಮಯ ಬಂದಿದೆ' ಎಂದು ತಂಡಕ್ಕೆ ಶುಭ ಹಾರೈಸಿದರು.

ಚಿತ್ರತಂಡ ಸಿನಿಮಾದಲ್ಲಿನ ಪಾತ್ರದ ವಿವರಗಳನ್ನು ಮುಚ್ಚಿಟ್ಟಿದ್ದಾರೆ. ಇದು ಐವರು ಕೆಚ್ಚೆದೆಯ ಹುಡುಗರ ಕಥೆಯಾಗಿದ್ದು, ರೋಮಾಂಚಕ ಕ್ಲೈಮ್ಯಾಕ್ಸ್‌ನೊಂದಿಗೆ ಸಸ್ಪೆನ್ಸ್ ತುಂಬಿದ ಕಥಾವಸ್ತುವನ್ನು ಹೊಂದಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. 

ತನ್ವಿ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಗುರು ಬಂಡಿ ನಿರ್ಮಿಸಿರುವ ಈ ಚಿತ್ರದಲ್ಲಿ ಶೋಭರಾಜ್, ರಮೇಶ್ ಭಟ್, ಬಾಲರಾಜವಾಡಿ ಮತ್ತು ಮನಮೋಹನ್ ರೈ ಕೂಡ ಇದ್ದಾರೆ. ಡಿಒಪಿಯಾಗಿ ಅರುಣ್ ಸುರೇಶ್ ಅವರ ಛಾಯಾಗ್ರಹಣವಿದೆ. ಚಿತ್ರವು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಜೂನ್‌ನಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com