ಸಿನಿಮಾ ಹಿಟ್‌ ಆದರೆ ಮಾತ್ರ ಹಾಡುಗಳು ಜನರನ್ನು ತಲುಪುತ್ತವೆ: ಸಂಗೀತ ನಿರ್ದೇಶಕ ಮನೋಮೂರ್ತಿ

ಸಿನಿಮಾ ಹಿಟ್‌ ಆದರೆ ಮಾತ್ರ ಹಾಡುಗಳು ಜನರನ್ನು ತಲುಪುತ್ತೇವೆ. ಹಾಡುಗಳು ಹಿಟ್‌ ಆಗಲಿಲ್ಲವೆಂದರೆ ಕೆಲಸ ಕಡಿಮೆಯಾಗುತ್ತದೆ’ ಎಂದು ವಾಸ್ತವ ಸಂಗತಿಯನ್ನು ಬಿಚ್ಚಿಟ್ಟರು. ನನ್ನ ದೃಷ್ಟಿಯಲ್ಲಿ, ಇಂದು ಚಲನಚಿತ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ, ಹಾಡುಗಳು ಜನರನ್ನು ತಲುಪುವುದಿಲ್ಲ.
ಪ್ರಣಯಂ ಸಿನಿಮಾಗೆ ಮನೋ ಮೂರ್ತಿ ಸಂಗೀತ
ಪ್ರಣಯಂ ಸಿನಿಮಾಗೆ ಮನೋ ಮೂರ್ತಿ ಸಂಗೀತ
Updated on

ಅಮೆರಿಕ, ಅಮೆರಿಕ!, ನನ್ನ ಪ್ರೀತಿಯ ಹುಡುಗಿ, ಮುಂಗಾರು ಮಳೆ, ಅಮೃತ ಧಾರೆ ಮೊದಲಾದ ಹಿಟ್‌ ಚಿತ್ರಗಳ ಸೂಪರ್‌ ಹಿಟ್‌ ಗೀತೆಗಳನ್ನು ನೀಡಿರುವ ಸಂಗೀತ ನಿರ್ದೇಶಕ ಮನೋಮೂರ್ತಿ ಮತ್ತೊಮ್ಮೆ ಪ್ರಣಯ ಗೀತೆಗಳೊಂದಿಗೆ ಬಂದಿದ್ದಾರೆ. ಅವರು ಸಂಗೀತ ನೀಡಿರುವ ‘ಪ್ರಣಯಂ’ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ.

ಎನ್ ಆರ್ ಐ ಆಗಿರುವ ಸಂಗೀತ ನಿರ್ದೇಶಕರು ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದರು, ಈಗ ಹೊಸ ಚಿತ್ರದೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಮರಳಿದ್ದಾರೆ, ‘ರೊಮ್ಯಾಂಟಿಕ್‌, ಮಿಸ್ಟ್ರಿ, ಥ್ರಿಲ್ಲರ್‌ ಸಿನಿಮಾವಿದು. ಚಿತ್ರದಲ್ಲಿ 6 ಹಾಡುಗಳಿದ್ದು, ಎಲ್ಲವೂ ಸುಮಧುರವಾಗಿವೆ. ಸಿನಿಮಾದಲ್ಲಿ 5 ಹಾಡುಗಳು ಮಾತ್ರ ಬಳಕೆಯಾಗಿವೆ. 3 ಹಾಡುಗಳಿಗೆ ಜಯಂತ ಕಾಯ್ಕಿಣಿ ಸಾಹಿತ್ಯವಿದೆ. ಸೋನು ನಿಗಂ, ಕೈಲಾಸ್‌ ಖೇರ್‌, ಹೇಮಂತ್‌ ಮೊದಲಾದವರು ಹಾಡಿದ್ದಾರೆ.

ರಾಜವರ್ದನ್ ಮತ್ತು ನಯನಾ ಗಂಗೂಲಿ ನಟಿಸಿರುವ ಈ ಚಿತ್ರವನ್ನು ಪಿ2 ಪ್ರೊಡಕ್ಷನ್‌ನ ಪರಮೇಶ್ ನಿರ್ಮಿಸಿದ್ದು, ಫೆಬ್ರವರಿ 9 ರಂದು ಬಿಡುಗಡೆಯಾಗಲಿದೆ. ಅಮೆರಿಕದಲ್ಲಿ ನೆಲೆಸಿರುವ ಅವರು, ಸಂಯೋಜನೆಯ ಕೆಲಸವನ್ನು ಅಲ್ಲಿಯೇ ಮುಗಿಸುತ್ತಾರೆ. ಹಾಡಿನ ರೆಕಾರ್ಡಿಂಗ್‌ ಮತ್ತಿತರ ಕೆಲಸಗಳಿಗೆ ಬೆಂಗಳೂರಿಗೆ ಬರುತ್ತಾರೆ. ವರ್ಷದ ಅರ್ಧಭಾಗ ಇಲ್ಲಿಯೇ ಇದ್ದು ಕೆಲಸ ಮಾಡುತ್ತೇನೆ. ಉಳಿದ ವೇಳೆ ವಿದೇಶದಲ್ಲಿರುತ್ತೇನೆ ಎಂದಿದ್ದಾರೆ.

ಸಿನಿಮಾ ಹಿಟ್‌ ಆದರೆ ಮಾತ್ರ ಹಾಡುಗಳು ಜನರನ್ನು ತಲುಪುತ್ತವೆ. ಹಾಡುಗಳು ಹಿಟ್‌ ಆಗಲಿಲ್ಲವೆಂದರೆ ಕೆಲಸ ಕಡಿಮೆಯಾಗುತ್ತದೆ’ ಎಂದು ವಾಸ್ತವ ಸಂಗತಿಯನ್ನು ಬಿಚ್ಚಿಟ್ಟರು. ನನ್ನ ದೃಷ್ಟಿಯಲ್ಲಿ, ಇಂದು ಚಲನಚಿತ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ, ಹಾಡುಗಳು ಜನರನ್ನು ತಲುಪುವುದಿಲ್ಲ ಎಂಬುದನ್ನು ನಾನು ಅರಿತುಕೊಂಡೆ, ಆದರೆ ಇಂದು, ಜನರು ಹೆಚ್ಚಾಗಿ ಟ್ರೇಲರ್‌ಗಳಿಗೆ ಆಕರ್ಷಿತರಾಗುತ್ತಾರೆ, ಇದು ಕೂಡ ಸಿನಿಮಾಗೆ ಪ್ರೇಕ್ಷಕರಿಗೆ ನೀಡುವ ಅಹ್ವಾನ ವಾಗಿದೆ.

ಈಗ ಎಲ್ಲವೂ ಮೊದಲಿನಂತಿಲ್ಲ,  ಹಾಡುಗಳು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಮೊದಲಿನ ರೀತಿ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಆ ದಿನಗಳಲ್ಲಿ ಆಲ್ಬಮ್‌ಗಳು ಸಿಡಿ ಅಥವಾ ಎಫ್‌ಎಂನಲ್ಲಿರುತ್ತಿದ್ದವು. ಈಗ, ಹಾಡುಗಳು ಬಿಡುಗಡೆಯ ಮೊದಲು ಪ್ರತಿ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿವೆ, ಚಿತ್ರಮಂದಿರಗಳಲ್ಲಿ ಅವುಗಳನ್ನು ವೀಕ್ಷಿಸುವ ಮೊದಲು ಜನರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿದೆ. ನಾನು ಸಂಗೀತ ನೀಡಿರುವ ಬೆರಳೆಣಿಕೆಯಷ್ಟು ಚಿತ್ರಗಳು ಬೇರೆ ಬೇರೆ ಕಾರಣಗಳಿಂದ ಸೋತಿವೆ. ಆಗಲೂ ಹಾಡುಗಳು ಚೆನ್ನಾಗಿ ಮೂಡಿಬಂದಿವೆ, ಆದರೆ ನಾವು ನಿರೀಕ್ಷಿಸಿದ ಮಟ್ಟಕ್ಕೆ ಅಲ್ಲ ಎಂದು ತಿಳಿಸಿದ್ದಾರೆ.

ಜಯಂತ್ ಕಾಯ್ಕಿಣಿ, ಹೃದಯ ಶಿವ ಮತ್ತು ಚಿನ್ಮಯ ಭಾವಿಕೆರೆ ಸಾಹಿತ್ಯ ಬರೆದಿದ್ದಾರೆ. “ಹೆಚ್ಚಿನ ಮಟ್ಟಿಗೆ, ನಾನು ನಿರ್ದೇಶಕರು ಬಯಸಿದ್ದನ್ನು ನೀಡಬೇಕು. ಪ್ರಸಿದ್ಧ ಗಾಯಕರನ್ನು ಕರೆ ತರಬೇಕು. ಈ ಬಾರಿ ದಾವಣಗೆರೆಯಲ್ಲಿ ವಾಸವಾಗಿರುವ ವಾಣಿ ಸತೀಶ್ ಎಂಬ ಹೊಸ ಗಾಯಕಿಯನ್ನು ಪರಿಚಯಿಸಿದ್ದೇವೆ ಎಂದು ಹೇಳಿದ್ದಾರೆ.

ಗಜರಾಮ ಸಿನಿಮಾಗೂ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಮುಂದಿನ ಪ್ರಾಜೆಕ್ಟ್ ಮತ್ತು ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶನದ ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕಾಗಿಯೂ ಸಂಗೀತ ನೀಡಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com