ಕೆರೆಬೇಟೆ ಸಿನಿಮಾ ಮೂಲಕ ದೊಡ್ಡ ಬ್ರೇಕ್ ನಿರೀಕ್ಷೆ: ನಟ ಗೌರಿಶಂಕರ್

ಮಾರ್ಚ್ 15ರಂದು ಕೆರೆಬೇಟೆ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಟ ಗೌರಿಶಂಕರ್, ಈ ಸಿನಿಮಾ ಮಾಡು ಇಲ್ಲವೇ ಮಡಿ ಅವಕಾಶ ಎನ್ನುತ್ತಾರೆ. ಜನಮನ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಜೈಶಂಕರ್ ಪಟೇಲ್ ಅವರ ಬೆಂಬಲದೊಂದಿಗೆ ಕೆರೆಬೇಟೆ ಸಿನಿಮಾವನ್ನು ರಾಜಗುರು ಬಿ ನಿರ್ದೇಶಿಸಿದ್ದಾರೆ.
ಕೆರೆಬೇಟೆ ಸಿನಿಮಾದಲ್ಲಿ ನಟ ಗೌರಿಶಂಕರ್
ಕೆರೆಬೇಟೆ ಸಿನಿಮಾದಲ್ಲಿ ನಟ ಗೌರಿಶಂಕರ್

ಮಾರ್ಚ್ 15ರಂದು ಕೆರೆಬೇಟೆ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಟ ಗೌರಿಶಂಕರ್, ಈ ಸಿನಿಮಾ ಮಾಡು ಇಲ್ಲವೇ ಮಡಿ ಅವಕಾಶ ಎನ್ನುತ್ತಾರೆ. ನನ್ನ ಚೊಚ್ಚಲ 'ರಾಜಹಂಸ (2017) ಸಿನಿಮಾಗಾಗಿ ನಾನು ಸಾಕಷ್ಟು ಶ್ರಮ ವಹಿಸಿದ್ದೆ. ಆದರೆ, ಕೆಲವು ಕಾರಣಗಳಿಂದ ಚಿತ್ರವು ಯಶಸ್ಸು ಕಾಣಲಿಲ್ಲ. ಆ ವೈಫಲ್ಯದಿಂದ ಹೊರಬರಲು ವಿಶೇಷವಾಗಿ ಹಣಕಾಸಿನ ನೆರವು ಪಡೆದುಕೊಂಡಿದ್ದು ಬಹಳ ಸಮಯ ತೆಗೆದುಕೊಂಡಿತು. ಆದರೆ, ನಾನು ಬಿಡಲಿಲ್ಲ ಮತ್ತು ನನ್ನ ಎರಡನೇ ಸಿನಿಮಾ ಕೆರೆಬೇಟೆಗೆ ಕೆಲಸ ಮಾಡಲು ಸುಮಾರು ಆರು ವರ್ಷಗಳನ್ನು ತೆಗೆದುಕೊಂಡಿದ್ದೇನೆ ಎಂದು ಗೌರಿಶಂಕರ್ ಹೇಳುತ್ತಾರೆ.

ಜನಮನ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಜೈಶಂಕರ್ ಪಟೇಲ್ ಅವರ ಬೆಂಬಲದೊಂದಿಗೆ ಕೆರೆಬೇಟೆ ಸಿನಿಮಾವನ್ನು ರಾಜಗುರು ಬಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಬಿಂದು ಶಿವರಾಂ ನಾಯಕಿಯಾಗಿ ನಟಿಸಿದ್ದಾರೆ. ಇದರೊಂದಿಗೆ ಗೋಪಾಲಕೃಷ್ಣ ದೇಶಪಾಂಡೆ ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯಾ ಅವರ ಸಂಗೀತ, ಕೀರ್ತನ್ ಪೂಜಾರಿಯವರ ಛಾಯಾಗ್ರಹಣವಿದೆ.

ಗೌರಿಶಂಕರ್ ನಟನೆಯೊಂದಿಗೆ ಇತರ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಚಿತ್ರ ನಿರ್ಮಾಣದೊಂದಿಗೆ ಗೌರಿಶಂಕರ್ ಅವರು ಕೆರೆಬೇಟೆಗೆ ನಿರ್ದೇಶಕರ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆದಿದ್ದಾರೆ. 'ಇತರರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಸ್ಥಳಾವಕಾಶವಿದ್ದರೂ ಅಂತಿಮವಾಗಿ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಯೋಜನೆಯಲ್ಲಿ ತೊಡಗಿರುವ ಎಲ್ಲರಿಗೂ ನಾನು ಸ್ಪಷ್ಟಪಡಿಸಿದೆ. ಚಿತ್ರದ ಯಶಸ್ಸಿನ ಶ್ರೇಯಸ್ಸನ್ನು ಎಲ್ಲರೂ ಹಂಚಿಕೊಂಡರೂ, ಅದರ ಸೋಲಿನ ಸಂಪೂರ್ಣ ಹೊಣೆಗಾರಿಕೆಯನ್ನು ನಾನು ತೆಗೆದುಕೊಳ್ಳುತ್ತೇನೆ. ಏಕೆಂದರೆ ನಾನು ಇತರರನ್ನು ದೂಷಿಸುವುದನ್ನು ನಂಬುವುದಿಲ್ಲ ಎಂದು ಅವರು ಪ್ರತಿಪಾದಿಸುತ್ತಾರೆ.

ಕೆರೆಬೇಟೆ ಸಿನಿಮಾದಲ್ಲಿ ನಟ ಗೌರಿಶಂಕರ್
'ಕೆರೆಬೇಟೆ' ಬಿಡುಗಡೆಗೆ ಸಿದ್ಧ; ಚಿತ್ರದಲ್ಲಿ ನನ್ನ ಹುಟ್ಟೂರು ಮಲೆನಾಡಿನ ಸೊಬಗು ಆಳವಾಗಿ ಬೇರೂರಿದೆ: ನಿರ್ದೇಶಕ ರಾಜಗುರು

ಕೆರೆಬೇಟೆ ಚಿತ್ರ ನಿರ್ಮಾಣ ಶಿಲ್ಪಕಲೆಯಂತೆಯೇ ಇತ್ತು. ಪ್ರತಿಯೊಂದು ವಿವರವನ್ನು ನಿಖರವಾಗಿ ಯೋಜಿಸಲಾಗಿದೆ. ಸೆಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ ಮತ್ತು ಚಿತ್ರ ತಯಾರಿಕೆ ಮುನ್ನ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆವು. ಕೆರೆಬೇಟೆಯು ಮಲೆನಾಡಿನಲ್ಲಿ ಕೆರೆ ಬೇಟೆ ಎಂಬ ಜನಪ್ರಿಯ ಮೀನುಗಾರಿಕೆಯ ಸುತ್ತ ಸುತ್ತುತ್ತದೆ. ಅದು ಈವರೆಗೂ ಅನ್ವೇಷಿಸದ ವಿಷಯವನ್ನೂ ಅನ್ವೇಷಿಸುತ್ತದೆ ಎನ್ನುತ್ತಾರೆ ಗೌರಿಶಂಕರ್.

'ನಾವು ಮಲೆನಾಡಿನ ಸಂಸ್ಕೃತಿಯನ್ನು ಆಳವಾಗಿ ಪ್ರದರ್ಶಿಸಿದ್ದೇವೆ ಮತ್ತು ಆ ವಲಯದ ಜೀವನಶೈಲಿಯನ್ನು ಚಿತ್ರಿಸಿದ್ದೇವೆ. ಪ್ರೀತಿಯ ಭಾವನೆಗಳಿಂದ ಮತ್ತು ಫ್ಯಾಮಿಲಿ ಸೆಂಟಿಮೆಂಟ್‌ಗಳವರೆಗೆ ಕೆರೆಬೇಟೆಯಲ್ಲಿ ಎಲ್ಲವೂ ಇದೆ. ಈ ಪ್ರದೇಶದ ಬೇರೂರಿರುವ ಗ್ರಾಮೀಣ ಜೀವನದ ಹಳ್ಳಿಯ ಮೋಡಿಯನ್ನು ಚಿತ್ರವು ಸೆರೆಹಿಡಿಯುತ್ತದೆ. ನಾಯಕನನ್ನು ಯಾವಾಗಲೂ ಧನಾತ್ಮಕವಾಗಿ ಚಿತ್ರಿಸುವ ಚಿತ್ರಗಳಿಗಿಂತ ಭಿನ್ನವಾಗಿ, ಕೆರೆಬೇಟೆಯಲ್ಲಿ ನಾಯಕನಿಗೆ ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಮುಖಗಳಿವೆ. ಏಕೆಂದರೆ, ಅದು ಪ್ರತಿಯೊಬ್ಬ ಮನುಷ್ಯನ ಸ್ವಭಾವವಾಗಿದೆ' ಎಂದು ಹೇಳಿದ್ದಾರೆ.

ಕೆರೆಬೇಟೆ ಸಿನಿಮಾದಲ್ಲಿ ನಟ ಗೌರಿಶಂಕರ್
ಗೌರಿಶಂಕರ್ ಅಭಿನಯದ 'ಕೆರೆಬೇಟೆ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ಚಿತ್ರ ಯಶಸ್ವಿಯಾಗಲಿದೆ ಎನ್ನುವ ನಂಬಿಕೆ ಇದೆ. ಈ ಚಿತ್ರಕ್ಕೆ ನನ್ನ ಕಡೆಯಿಂದ ಸಿಗಬೇಕಾದ ಎಲ್ಲವನ್ನು ನೀಡಿದ್ದೇನೆ. ಇದು ನನಗೆ ತೃಪ್ತಿಯನ್ನು ನೀಡಿದೆ. ನಾನು ಸುಮಾರು 18 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೇನೆ. ನಟನಾಗುವ ಮೊದಲು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಸರಿಯಾದ ಬ್ರೇಕ್ ಪಡೆಯಲು ನಾನು ಇನ್ನೂ ಹೆಣಗಾಡುತ್ತಿದ್ದೇನೆ ಮತ್ತು ಪ್ರೇಕ್ಷಕರು ನನ್ನ ಕನಸನ್ನು ನನಸಾಗಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ ಗೌರಿಶಂಕರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com