ತರುಣ್ ಸುಧೀರ್ ನಿರ್ಮಾಣದ ಪುನೀತ್ ರಂಗಸ್ವಾಮಿ ನಿರ್ದೇಶನದ ಚೊಚ್ಚಲ ಚಿತ್ರದ 'ಮಹಾನಟಿ' ಪ್ರಿಯಾಂಕಾ ನಾಯಕಿ!

ಮೈಸೂರು ಮೂಲದ ಪ್ರಿಯಾಂಕಾ, ನೈಜ ಜೀವನದ ಘಟನೆಗಳಿಂದ ಪ್ರೇರಿತವಾದ ಪ್ರೇಮಕಥೆಯಲ್ಲಿ ರಾಣಾ ಅವರೊಂದಿಗೆ ನಟಿಸಲಿದ್ದಾರೆ, ಇದನ್ನು ತರುಣ್ ಕಿಶೋರ್ ಕ್ರಿಯೇಟಿವೆಜ್ ಮತ್ತು ಅಟ್ಲಾಂಟಾ ನಾಗೇಂದ್ರ ಅವರ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.
Priyanka Achar
ಪ್ರಿಯಾಂಕಾ ಆಚಾರ್
Updated on

ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಮಹಾನಟಿ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್ ಅವರನ್ನು ನಾಯಕಿಯಾಗಿ ನಟಿಸುತ್ತಿದ್ದಾರೆ.

ಮೈಸೂರು ಮೂಲದ ಪ್ರಿಯಾಂಕಾ, ನೈಜ ಜೀವನದ ಘಟನೆಗಳಿಂದ ಪ್ರೇರಿತವಾದ ಪ್ರೇಮಕಥೆಯಲ್ಲಿ ರಾಣಾ ಅವರೊಂದಿಗೆ ನಟಿಸಲಿದ್ದಾರೆ, ಇದನ್ನು ತರುಣ್ ಕಿಶೋರ್ ಕ್ರಿಯೇಟಿವೆಜ್ ಮತ್ತು ಅಟ್ಲಾಂಟಾ ನಾಗೇಂದ್ರ ಅವರ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.

ತರುಣ್ ಸುಧೀರ್ ಹಲವು ಹೊಸಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಈ ಹಿಂದೆ ಆಶಾ ಭಟ್ ಅವರನ್ನು ರಾಬರ್ಟ್‌ನಲ್ಲಿ ಮತ್ತು ಆರಾಧನಾ ರಾಮ್ ಅವರನ್ನು ಕಾಟೇರಾದಲ್ಲಿ ಪರಿಚಯಿಸಿದ್ದಾರೆ. ಈಗ, ಪ್ರಿಯಾಂಕಾ ಅವರಿಗೆ ಸಿನಿಮಾದಲ್ಲಿ ದೊಡ್ಡ ಬ್ರೇಕ್ ನೀಡುತ್ತಿದ್ದಾರೆ. ಮಹಾನಟಿಯಲ್ಲಿ ಜಡ್ಜ್ ಆಗಿದ್ದರು. ಈ ವೇಳೆ ಆಕೆಯ ಅಭಿನಯದಿಂದ ಆಕರ್ಷಿತರಾದರು ಮತ್ತು ಅವರಲ್ಲಿ ಅಪಾರ ಸಾಮರ್ಥ್ಯವನ್ನು ಕಂಡರು.

ನಾನು ರಂಗಭೂಮಿಯಲ್ಲಿ ತರಬೇತಿ ಪಡೆಯಲು ಪ್ರಾರಂಭಿಸಿದಾಗ, ನಾನು ದೂರದರ್ಶನದಲ್ಲಿನಟಿಸುವ ಕನಸು ಕಂಡೆ. ಮಹಾನಟಿಯನ್ನು ಗೆಲ್ಲುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಮಹಾನಟಿ ಗೆದ್ದ ನಂತರ ಅವಕಾಶ ತೆರೆಯಿತು. ತರುಣ್ ಸರ್ ಅವರ ಬೆಂಬಲ ಅಪಾರವಾಗಿದೆ. ಅವರು ರಿಯಾಲಿಟಿ ಶೋ ಸಮಯದಲ್ಲಿ 500 ರೂಪಾಯಿಗಳ ನೋಟು ನನಗೆ ನೀಡಿದರು. ಅದು ನನಗೆ ಬಹಳ ದೊಡ್ಡ ಆಶೀರ್ವಾದವಾಗಿತ್ತು, ಈಗ ಅವರು ನನ್ನ ವೃತ್ತಿಜೀವನದ ಅತಿದೊಡ್ಡ ಬ್ರೇಕ್ ನೀಡುತ್ತಿದ್ದಾರೆ ಎಂದು ಅವರು ಉತ್ಸಾಹದಿಂದ ಪ್ರಿಯಾಂಕಾ ಆಚಾರ್ ಹೇಳಿಕೊಳ್ಳುತ್ತಾರೆ.

Priyanka Achar
ತರುಣ್ ಸುಧೀರ್ ನಿರ್ಮಾಣದ ಮುಂದಿನ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ನಿರ್ದೇಶನ

ಇದು ಇನ್ನೂ ಕನಸಿನಂತೆ ಭಾಸವಾಗುತ್ತಿದೆ. ರಂಗಭೂಮಿಯಿಂದ ಮಹಾನಟಿಗೆ, ಮತ್ತು ಈಗ ತರುಣ್ ಸರ್ ಅವರ ಮಾರ್ಗದರ್ಶನದಲ್ಲಿ ಚಲನಚಿತ್ರಕ್ಕೆ ಕಾಲಿಡುತ್ತಿದ್ದೇನೆ, ಇದು ನಾನು ನಿರೀಕ್ಷಿಸಿದ್ದಕ್ಕಿಂತ ಮೀರಿದೆ. ಅವರ ಪ್ರಶಂಸೆ ಗಳಿಸುವುದು ಸುಲಭವಲ್ಲ, ಆದ್ದರಿಂದ ಅವರು ನನ್ನ ಪ್ರತಿಭೆಯನ್ನು ನಂಬುವಂತೆ ಮಾಡುವುದು ಬಹಳಷ್ಟು ಅರ್ಥಪೂರ್ಣವಾಗಿದೆ ಎಂದಿದ್ದಾರೆ.

ರಂಗಭೂಮಿ ಅನುಭವದ ಹೊರತಾಗಿಯೂ, ಪ್ರಿಯಾಂಕಾ ದೊಡ್ಡ ಪರದೆಗೆ ಪರಿವರ್ತನೆಯ ಸವಾಲುಗಳನ್ನು ಒಪ್ಪಿಕೊಳ್ಳುತ್ತಾರೆ. "ಕ್ಯಾಮೆರಾ ಮುಂದೆ ನಟಿಸುವುದು ಸಂಪೂರ್ಣ ಹೊಸ ಜಗತ್ತು, ಆದರೆ ನಾನು ಪ್ರತಿ ಶಾಟ್‌ನೊಂದಿಗೆ ಕಲಿಯುತ್ತಿದ್ದೇನೆ. ಸೆಟ್‌ಗೆ ಹೆಜ್ಜೆ ಹಾಕುವ ಮೊದಲು ನಾನು ನನ್ನನ್ನು ಸಿದ್ಧಪಡಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ..

ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣದೊಂದಿಗೆ, ಇನ್ನೂ ಹೆಸರಿಡದ ಈ ಚಿತ್ರವು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣಗೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com