ಮಂಸೋರೆ ನಿರ್ದೇಶನದ 'ದೂರ ತೀರ ಯಾನ' ಚಿತ್ರೀಕರಣ ಪೂರ್ಣ; ಜುಲೈನಲ್ಲಿ ತೆರೆಗೆ ಬರಲು ಸಿದ್ಧತೆ

ಈ ಚಿತ್ರವು ಬೆಂಗಳೂರಿನಿಂದ ಗೋವಾಗೆ ಪ್ರಯಾಣಿಸುವ ಇಬ್ಬರು ಯುವ ಪ್ರೇಮಿಗಳ ಕಥೆಯನ್ನು ಒಳಗೊಂಡಿದೆ. ದಾರಿಯುದ್ದಕ್ಕೂ ಅವರ ಪ್ರೀತಿಯ ನಿಜವಾದ ಅರ್ಥವನ್ನು ಹುಡುಕುತ್ತದೆ.
ದೂರ ತೀರ ಯಾನ ಚಿತ್ರತಂಡ
ದೂರ ತೀರ ಯಾನ ಚಿತ್ರತಂಡ
Updated on

ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮನ್ಸೋರೆ ಆ್ಯಕ್ಷನ್ ಕಟ್ ಹೇಳಿರುವ 'ದೂರ ತೀರ ಯಾನ' ಚಿತ್ರವು ಚಿತ್ರೀಕರಣ ಪೂರ್ಣಗೊಳಿಸಿದೆ. ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಬೆಂಗಳೂರು, ಉಡುಪಿ, ಕುಂದಾಪುರ, ಗೋಕರ್ಣ, ಮುರುಡೇಶ್ವರ, ಕಾರವಾರ, ಯಲ್ಲಾಪುರ, ದಾಂಡೇಲಿ ಮತ್ತು ಗೋವಾ ಸೇರಿದಂತೆ ಸುಂದರವಾದ ಸ್ಥಳಗಳಲ್ಲಿ 40 ದಿನಗಳ ಕಾಲ ಚಿತ್ರೀಕರಣ ಮುಗಿಸಿದೆ.

ಈ ಚಿತ್ರವು ಬೆಂಗಳೂರಿನಿಂದ ಗೋವಾಗೆ ಪ್ರಯಾಣಿಸುವ ಇಬ್ಬರು ಯುವ ಪ್ರೇಮಿಗಳ ಕಥೆಯನ್ನು ಒಳಗೊಂಡಿದೆ. ದಾರಿಯುದ್ದಕ್ಕೂ ಅವರ ಪ್ರೀತಿಯ ನಿಜವಾದ ಅರ್ಥವನ್ನು ಹುಡುಕುತ್ತದೆ. ಚಿತ್ರಕ್ಕೆ ಮಂಸೋರೆ ಅವರೇ ಚಿತ್ರಕಥೆ ಬರೆದಿದ್ದು, ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಮತ್ತು ಕಿರಣ್ ಕಾವೇರಪ್ಪ ಅವರು ಸಾಹಿತ್ಯ ಬರೆದಿದ್ದು, ಬಕ್ರೇಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿವೆ.

ತಮ್ಮ ವಿಶಿಷ್ಟ ಶೈಲಿನಯ ನಿರ್ದೇಶನಕ್ಕೆ ಹೆಸರುವಾಸಿಯಾದ ಮಂಸೋರೆ ಅವರು ಪ್ರತಿಭಾವಂತ ನಟರ ಗುಂಪನ್ನು ಚಿತ್ರಕ್ಕೆ ಕರೆತಂದಿದ್ದಾರೆ. ಮುಂಬರುವ ದಿನಗಳಲ್ಲಿ ಕೆಲವು ಪ್ರಮುಖ ನಟರ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ಹೇಳಿದೆ.

ಚಿತ್ರದ ಕಲಾ ನಿರ್ದೇಶನವನ್ನು ಸರವಣನ್ ಕುಮಾರ್ ನಿರ್ವಹಿಸಿದ್ದಾರೆ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಾಗೇಂದ್ರ ಕೆ ಉಜ್ಜನಿ ಚಿತ್ರಕ್ಕೆ ಸಂಕಲನಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸರಾಗವಾಗಿ ನಡೆಯುತ್ತಿದ್ದು, ಜುಲೈನಲ್ಲಿ 'ದೂರ ತೀರ ಯಾನ' ರಾಜ್ಯಾದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಖಚಿತಪಡಿಸಿದ್ದಾರೆ.

ದೂರ ತೀರ ಯಾನ ಚಿತ್ರತಂಡ
ಪಥ ಬದಲಿಸಿದ ಮಂಸೋರೆ: 'ದೂರ ತೀರ ಯಾನ' ಮೂಲಕ ಆಧುನಿಕ ಪ್ರೇಮಕತೆ ಹೇಳಲು ಹೊರಟ ನಿರ್ದೇಶಕ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com