ಕರಾವಳಿಯ ಆರಾಧ್ಯ ದೈವದ ಕಥೆಯುಳ್ಳ 'ಕೊರಗಜ್ಜ' ಚಿತ್ರ ಬಿಡುಗಡೆಗೆ ಸಿದ್ಧ; ಸುಧೀರ್ ಅತ್ತಾವರ ಆ್ಯಕ್ಷನ್ ಕಟ್!

ಕಿರಣ್ ಬೇಡಿ ನಟಿಸಿರುವ ಮತ್ತು ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸಿನಿಮಾ 800 ವರ್ಷಗಳ ಹಿಂದಿನ ಕಥೆ ಹೇಳಲಿದೆ.
ಕೊರಗಜ್ಜ ಚಿತ್ರದ ಸ್ಟಿಲ್
ಕೊರಗಜ್ಜ ಚಿತ್ರದ ಸ್ಟಿಲ್
Updated on

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಮತ್ತು ಕೊರಗಜ್ಜನ ಕಥೆಯನ್ನು ಒಳಗೊಂಡ ಬಹುಭಾಷಾ ಚಿತ್ರ 'ಕೊರಗಜ್ಜ' ಬಿಡುಗಡೆಗೆ ಸಜ್ಜಾಗುತ್ತಿದೆ. ಕರ್ನಾಟಕದ ಕರಾವಳಿ (ತುಳುನಾಡು) ಪ್ರದೇಶದಲ್ಲಿ ಪೂಜಿಸುವ ಪ್ರಮುಖ ದೇವತೆಗಳಲ್ಲಿ ಒಂದಾದ ಕೊರಗಜ್ಜನ ಕಥೆಯನ್ನು ಬೆಳ್ಳಿ ಪರದೆ ಮೇಲೆ ತರುತ್ತಿದೆ. ಚಿತ್ರಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಸುಧೀರ್ ಅತ್ತಾವರ ನಿರ್ದೇಶನವಿದೆ.

ಕೊರಗಜ್ಜ ಚಿತ್ರದಲ್ಲಿ ಕಬೀರ್ ಬೇಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಭವ್ಯ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ಶ್ರುತಿ ಮತ್ತು ನವೀನ್ ಡಿ ಪಡೀಲ್ ಇದ್ದಾರೆ. ಚಿತ್ರಕ್ಕೆ ಮನೋಜ್ ಪಿಳ್ಳೈ ಅವರ ಛಾಯಾಗ್ರಹಣ, ಗೋಪಿ ಸುಂದರ್ ಅವರ ಸಂಗೀತ ಸಂಯೋಜನೆ ಮತ್ತು ಜಿತ್ ಜೋಷಿ ಮತ್ತು ವಿದ್ಯಾಧರ್ ಶೆಟ್ಟಿಯವರ ಸಂಕಲನವಿದೆ.

ಸರಿಸುಮಾರು 800 ವರ್ಷಗಳ ಹಿಂದೆ ಸ್ಥಳೀಯ ಯುವಕರು ಹೇಗೆ ಪರಿವರ್ತನೆಯಾದರು ಎಂಬ ಪ್ರಯಾಣದ ಕುರಿತು ಚಿತ್ರದಲ್ಲಿ ಹೇಳಲಾಗಿದೆ. ಅವರು ಕೊರಗಜ್ಜನ ದೈವಿಕ ವ್ಯಕ್ತಿಯಾಗಿ ವಿಕಸನಗೊಳ್ಳುತ್ತಾರೆ. ಚಿತ್ರತಂಡದ ಪ್ರಕಾರ, ಕಾಂತಾರ ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ಭೂತ ಕೋಲಾ ಸೇರಿದಂತೆ ಚಿತ್ರದ ನಿರೂಪಣೆಯು ಸ್ಥಳೀಯ ಸಂಪ್ರದಾಯ ಮತ್ತು ಜಾನಪದದ ಅಂಶಗಳೊಂದಿಗೆ ಪುಷ್ಟೀಕರಿಸಲ್ಪಟ್ಟಿದೆ.

ಕೊರಗಜ್ಜನ ಕಥೆಯು ಕೇರಳದ ಪೂಜ್ಯ ದೇವತೆ ಮುತ್ತಪ್ಪನ್‌ನ ದಂತಕಥೆಯೊಂದಿಗೆ ಸಮಾನಾಂತರವಾಗಿದೆ ಎಂದು ಹೇಳಲಾಗುತ್ತದೆ. ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ತುಳು, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com