ಶ್ರೇಯಸ್ ಮಂಜು ನಟನೆಯ 'ದಿಲ್‌ದಾರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕೀರ್ತಿ ಕೃಷ್ಣ ಎಂಟ್ರಿ!

ನಟ ಶರಣ್ ಮತ್ತು ನಟಿ ಶ್ರುತಿ ಅವರ ಕುಟುಂಬದಿಂದ ಬಂದಿರುವ ಕೀರ್ತಿ ಕೃಷ್ಣ ಅವರನ್ನು ಆರಂಭದಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರು 'ದೇವರು ರುಜು ಮಾಡಿದನು' ಚಿತ್ರದ ಮೂಲಕ ಪರಿಚಯಿಸಿದ್ದರು.
ಕೀರ್ತಿ ಕೃಷ್ಣ
ಕೀರ್ತಿ ಕೃಷ್ಣ
Updated on

ಪಡ್ಡೆಹುಲಿ ಚಿತ್ರದ ನಾಯಕ ಶ್ರೇಯಸ್ ಮಂಜು ಅವರ ಮುಂದಿನ ಚಿತ್ರ 'ವಿಷ್ಣು ಪ್ರಿಯ' ಫೆಬ್ರುವರಿ 21ರಂದು ಬಿಡುಗಡೆಗೆ ಸಜ್ಜಾಗಿದೆ. ಈಮಧ್ಯೆ, ಶ್ರೇಯಸ್ "ದಿಲ್‌ದಾರ್" ಚಿತ್ರೀಕರಣವನ್ನು ಸಹ ಪೂರ್ಣಗೊಳಿಸಿದ್ದು, ಕೇವಲ ಒಂದು ಹಾಡಷ್ಟೇ ಬಾಕಿ ಉಳಿದಿದೆ. ಮಧು ಗೌಡ ಗಂಗೂರ್ ನಿರ್ದೇಶನದ ಈ ಚಿತ್ರದಲ್ಲಿ ಈಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಚಿತ್ರದಲ್ಲಿ ಶ್ರೇಯಸ್ ಜೊತೆಗೆ ಕೀರ್ತಿ ಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ.

ನಟ ಶರಣ್ ಮತ್ತು ನಟಿ ಶ್ರುತಿ ಅವರ ಕುಟುಂಬದಿಂದ ಬಂದಿರುವ ಕೀರ್ತಿ ಕೃಷ್ಣ ಅವರನ್ನು ಆರಂಭದಲ್ಲಿ ನಿರ್ದೇಶಕ ಸಿಂಪಲ್ ಸುನಿ ಅವರು 'ದೇವರು ರುಜು ಮಾಡಿದನು' ಚಿತ್ರದ ಮೂಲಕ ಪರಿಚಯಿಸಿದ್ದರು. ಅದಿನ್ನೂ ನಿರ್ಮಾಣ ಹಂತದಲ್ಲಿದೆ. ಇದೀಗ, ಕೀರ್ತಿ ಕೃಷ್ಣ ಅವರು 'ದಿಲ್‌ದಾರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ನಟಿಯನ್ನು ಬಲಿಷ್ಠವಾದ ಪಾತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಲಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ.

ಇದರೊಂದಿಗೆ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ವಿಶೇಷ ಹಾಡನ್ನು ಚಿತ್ರೀಕರಿಸಲು ನಿರ್ದೇಶಕರು ಸಿದ್ಧತೆ ನಡೆಸಿದ್ದಾರೆ. ಈ ಟ್ರ್ಯಾಕ್ ಕೆಲವು ತೀವ್ರವಾದ ಡ್ಯಾನ್ಸ್ ಝಲಕ್‌ಗಳನ್ನು ಹೊಂದಿರಲಿದ್ದು, ನಟ ಶ್ರೇಯಸ್ ನೃತ್ಯವನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಸದ್ಯದ ವೇಳಾಪಟ್ಟಿಯಂತೆ ಯುಗಾದಿ ಹಬ್ಬದಂದು ದಿಲ್‌ದಾರ್ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಚಿತ್ರದ ಇತರ ತಾರಾಗಣದಲ್ಲಿ ಜನಪ್ರಿಯ ಹಾಸ್ಯ ನಟರಾದ ಸಾಧು ಕೋಕಿಲ, ಚಂದ್ರಪ್ರಭಾ, ಕಾರ್ತಿಕ್ ಮತ್ತು ಚಿಲ್ಲರ್ ಮಂಜು ಕೂಡ ಇದ್ದಾರೆ. ಹೆಚ್ಚುವರಿಯಾಗಿ, ಕೆಜಿಎಫ್ ಖ್ಯಾತಿಯ ನಟ ಆಂಡ್ರೋ ಅವಿನಾಶ್ ಮತ್ತು ಭಜರಂಗಿ ಲೋಕಿ ಪ್ರಮುಖ ಪಾತ್ರಗಳಲ್ಲಿ ಪ್ರತಿಸ್ಪರ್ಧಿಗಳಾಗಿ ನಟಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com