'ತಮಿಳಿನಿಂದ ಕನ್ನಡ ಹುಟ್ಟಿತು' ಹೇಳಿಕೆ: ಕಮಲ್ ಹಾಸನ್‌ರ 'Thug Life' ವಿವಾದ ಕುರಿತು ರಾಣಾ ದಗ್ಗುಬಾಟಿ ಪ್ರತಿಕ್ರಿಯೆ

ಥಗ್ ಲೈಫ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ನೀಡಿದ ಹೇಳಿಕೆಯ ನಂತರ, ಕರ್ನಾಟಕದಿಂದ ಸಾಕಷ್ಟು ಟೀಕೆಗಳು ಕೇಳಿಬಂದವು.
ರಾಣಾ ದಗ್ಗುಬಾಟಿ - ಕಮಲ್ ಹಾಸನ್
ರಾಣಾ ದಗ್ಗುಬಾಟಿ - ಕಮಲ್ ಹಾಸನ್
Updated on

ಇತ್ತೀಚೆಗೆ ನಡೆದ ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ತೆಲುಗು ನಟ ರಾಣಾ ದಗ್ಗುಬಾಟಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿನ ಟೀಕೆಗಳು ಇಂತಹ ವಿವಾದಗಳಲ್ಲಿ ಪಾತ್ರವಹಿಸುತ್ತವೆ ಎಂದು ಸೂಚಿಸಿದರು.

'ಸಾಮಾಜಿಕ ಮಾಧ್ಯಮವು ಅಭಿಪ್ರಾಯ ವ್ಯಕ್ತಪಡಿಸುವ ಸ್ಥಳವಾಗಿದೆ. ಈ ಹಿಂದೆ, ನಿಮಗೆ ಅದು ಇರಲಿಲ್ಲ. ಆದರೆ, ಈಗ ಯಾವುದೇ ವಿಷಯ ಬಹು ಬೇಗ ಭಾವನಾತ್ಮಕ ಮತ್ತು ರಾಜಕೀಯವಾಗಿ ಮಾರ್ಪಡುತ್ತದೆ' ಎಂದು ರಾಣಾ ಹೇಳಿದರು.

ಥಗ್ ಲೈಫ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ನೀಡಿದ ಹೇಳಿಕೆಯ ನಂತರ, ಕರ್ನಾಟಕದಿಂದ ಸಾಕಷ್ಟು ಟೀಕೆಗಳು ಕೇಳಿಬಂದವು. ನಟ ಶಿವರಾಜ್‌ಕುಮಾರ್ ಮೇಲಿನ ಪ್ರೀತಿಯಿಂದ ಈ ಹೇಳಿಕೆ ನೀಡಿದ್ದೇನೆ ಮತ್ತು ಕನ್ನಡಕ್ಕೆ ನಿರ್ವಿವಾದದ ಪರಂಪರೆ ಇದೆ ಎಂದು ನಟ ನಂತರ ಸ್ಪಷ್ಟಪಡಿಸಿದರು. ಆದಾಗ್ಯೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಮತ್ತು ರಾಜ್ಯ ಹೈಕೋರ್ಟ್ ಥಗ್ ಲೈಫ್ ಚಿತ್ರ ಬಿಡುಗಡೆಯನ್ನು ತಡೆದಿದೆ. ಜೂನ್ 10 ರಂದು ಕಮಲ್ ಕೆಎಫ್‌ಸಿಸಿ ಜೊತೆ ಈ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ.

ನಟರು ಅಂತಹ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಮಾತನಾಡಿದ ಬಾಹುಬಲಿ ತಾರೆ, ಸಾರ್ವಜನಿಕರು ಮತ್ತು ಮಾಧ್ಯಮಗಳು ನಟರು ಮಾದರಿಗಳಾಗಿ ವರ್ತಿಸಬೇಕು ಅಥವಾ ಸಮಾಜದಲ್ಲಿ ಜನರು ಹೇಗೆ ವರ್ತಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಬೇಕು ಎಂದು ನಿರೀಕ್ಷಿಸಬಾರದು ಎಂದು ಹೇಳಿದರು.

ರಾಣಾ ದಗ್ಗುಬಾಟಿ - ಕಮಲ್ ಹಾಸನ್
'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ': ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ Kamal Hassan ಪತ್ರ

'ನೀವು ರಾಜಕಾರಣಿಗಳು, ವಿದ್ವಾಂಸರು ಮತ್ತು ವಿದ್ಯಾವಂತ ವರ್ಗವನ್ನು ನೋಡಬೇಕು. ಅವರು ನಿಮಗೆ ದಾರಿ ತೋರಿಸಲು ಸಹಾಯ ಮಾಡುತ್ತಾರೆ' ಎಂದು ರಾಣಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com