'ಉಸಿರು' ಚಿತ್ರದ ಟ್ಯಾಗ್‌ಲೈನ್ ಒಂದು ರಹಸ್ಯಮಯ ಸುಳಿವು ನೀಡುತ್ತದೆ: ನಿರ್ದೇಶಕ ಪ್ರಭಾಕರ್

ಆರ್‌ಎಸ್‌ಪಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಿ ಹರೀಶ್ ನಿರ್ಮಿಸಿದ, ತಿಲಕ್ ಶೇಖರ್ ಮತ್ತು ಪ್ರಿಯಾ ಹೆಗ್ಡೆ ನಟಿಸಿರುವ ಉಸಿರು ಚಿತ್ರವು, ಸಸ್ಪೆನ್ಸ್ ಮತ್ತು ಭಾವನಾತ್ಮಕ ಕಥೆಯನ್ನು ಹೊಂದಿದೆ.
Tilak Shekhar and Priya Hegde in the Usiru movie
ಉಸಿರು ಚಿತ್ರದಲ್ಲಿ ತಿಲಕ್ ಶೇಖರ್ ಮತ್ತು ಪ್ರಿಯಾ ಹೆಗ್ಡೆ
Updated on

ತಮಿಳು ಚಿತ್ರರಂಗದಲ್ಲಿ 12 ವರ್ಷಗಳ ಪ್ರಯಾಣ ಮಾಡಿರುವ ಪ್ರಭಾಕರ್ ಇದೀಗ ತಾವೇ ಬರೆದು ನಿರ್ದೇಶಿಸಿದ ಚಿತ್ರದೊಂದಿಗೆ ಮರಳಿದ್ದಾರೆ. 'ಉಸಿರು' ಚಿತ್ರಕ್ಕೆ ಪ್ರಭಾಕರ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು ಮತ್ತು ಮೂಡಿಗೆರೆಗಳಲ್ಲಿ ಚಿತ್ರೀಕರಣ ಮುಗಿಸಿರುವ ಈ ಥ್ರಿಲ್ಲರ್ ಇದೀಗ ಅಂತಿಮ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಆರ್‌ಎಸ್‌ಪಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮಿ ಹರೀಶ್ ನಿರ್ಮಿಸಿದ, ತಿಲಕ್ ಶೇಖರ್ ಮತ್ತು ಪ್ರಿಯಾ ಹೆಗ್ಡೆ ನಟಿಸಿರುವ ಉಸಿರು ಚಿತ್ರವು, ಸಸ್ಪೆನ್ಸ್ ಮತ್ತು ಭಾವನಾತ್ಮಕ ಕಥೆಯನ್ನು ಹೊಂದಿದೆ. ತನ್ನ ಹೆಂಡತಿಯನ್ನು ಬೆದರಿಕೆಯಿಂದ ರಕ್ಷಿಸಲು ಪೊಲೀಸ್ ಅಧಿಕಾರಿಯ ಹತಾಶ ಕಾರ್ಯಾಚರಣೆ ಕುರಿತು ಹೇಳುತ್ತದೆ.

'ನೀವು ಕೇಳುವುದು ಸುಳ್ಳಾಗಿರಬಹುದು, ನೀವು ನೋಡುವುದು ಮೋಸಗೊಳಿಸಬಹುದು. ಆದರೆ, ನೀವು ಸ್ವಲ್ಪ ಸಮಯ ನಿಂತು ಯೋಚಿಸಿದಾಗ, ಸತ್ಯವು ತನ್ನ ಉಸಿರನ್ನು ಕಂಡುಕೊಳ್ಳುತ್ತದೆ' ಎಂದು ಲಕ್ಷ್ಮಿ ಹರೀಶ್ ಚಿತ್ರದ ಮೂಲ ಸಂದೇಶವನ್ನು ವಿವರಿಸುತ್ತಾರೆ.

ನಿರ್ದೇಶಕ ಪ್ರಭಾಕರ್, 'ಪ್ರತಿಯೊಂದು ಪಾತ್ರವೂ ಮುಖ್ಯವಾಗಿದೆ. ಉಸಿರು ಬದುಕುಳಿಯುವುದಕ್ಕಿಂತ ಹೆಚ್ಚಿನದಾಗಿದೆ. ಅದು ನಮಗೆ ಜೀವನವನ್ನು ನೀಡುತ್ತದೆ. ಚಿತ್ರವನ್ನು ನೋಡಿದ ನಂತರವೇ ಶೀರ್ಷಿಕೆಯು ಪರಿಪೂರ್ಣ ಅರ್ಥವನ್ನು ನೀಡುತ್ತದೆ. ಉಸಿರು ಚಿತ್ರದ ಟ್ಯಾಗ್‌ಲೈನ್ '07.08.09' ಆಗಿದ್ದು, ಒಂದು ನಿಗೂಢ ಸುಳಿವನ್ನು ನೀಡುತ್ತದೆ. ಪ್ರೇಕ್ಷಕರಿಗೆ ತನ್ನ ಗುಪ್ತ ಅರ್ಥ ಏನೆಂಬುದನ್ನು ಬಿಚ್ಚಿಡಲು ಆಹ್ವಾನಿಸುತ್ತದೆ' ಎನ್ನುತ್ತಾರೆ.

Tilak Shekhar and Priya Hegde in the Usiru movie
ಪ್ರತಿಯೊಬ್ಬ ನಟನು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಬೇಕು ಮತ್ತು ಹೊಸ ದೃಷ್ಟಿಕೋನ ನೀಡಬೇಕು: ತಿಲಕ್

ಶ್ರೀನಗರ ಕಿಟ್ಟಿ ಮತ್ತು ರವಿ ಆರ್ ಗರಣಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಭಾವನಾತ್ಮಕವಾಗಿರುವ ಹೈ-ಸ್ಟೇಕ್ಸ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಸುಳಿವನ್ನು ನೀಡುತ್ತದೆ.

ತನಿಖಾಧಿಕಾರಿಯಾಗಿ ನಟಿಸಿರುವ ತಿಲಕ್, 'ಈ ಪರಿಕಲ್ಪನೆಯು ನಾನು ಈವರೆಗೂ ಮಾಡಿದ ಚಿತ್ರಗಳಿಗಿಂತ ಭಿನ್ನವಾಗಿದೆ. ರಹಸ್ಯವಾಗಿಯೇ ಚಿತ್ರವು ಸಾಗುತ್ತದೆ' ಎಂದು ಹೇಳುತ್ತಾರೆ. ನಟಿ ಪ್ರಿಯಾ ಹೆಗ್ಡೆ, ತಮ್ಮ ಪಾತ್ರವು ಹಲವಾರು ಛಾಯೆಗಳನ್ನು ಹೊಂದಿದೆ ಮತ್ತು ನಿರೂಪಣೆಯಲ್ಲಿ ನಿರ್ಣಾಯಕ ತಿರುವು ನೀಡುತ್ತದೆ ಎಂದು ಹೇಳುತ್ತಾರೆ.

ಚಿತ್ರರಂಗದಲ್ಲಿ 25 ವರ್ಷಗಳನ್ನು ಆಚರಿಸುತ್ತಿರುವ ಸಂಯೋಜಕ ಆರ್‌ಎಸ್ ಗಣೇಶ್ ನಾರಾಯಣನ್, ಅಭಿ ಅವರ ಸಾಹಿತ್ಯದೊಂದಿಗೆ ಐದು ಹಾಡುಗಳಲ್ಲಿ ಕೆಲಸ ಮಾಡಿದ್ದಾರೆ. ಬೈರವರಾಮ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಚಿತ್ರದ ತಾರಾಗಣದಲ್ಲಿ ಸಂತೋಷ್, ಅಪೂರ್ವ ಮತ್ತು ಅರುಣ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com