ಹೇಮಂತ್ ಎಂ ರಾವ್ ನಿರ್ಮಾಣದ, ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಏಪ್ರಿಲ್‌ನಲ್ಲಿ ತೆರೆಗೆ

ಗುಲ್ಟು ಚಿತ್ರದ ಮೂಲಕ ಫೇಮಸ್ ಆಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ 'ಅಜ್ಞಾತವಾಸಿ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಹೇಮಂತ್ ಎಂ ರಾವ್ - ಅಜ್ಞಾತವಾಸಿ ಚಿತ್ರದ ಸ್ಟಿಲ್
ಹೇಮಂತ್ ಎಂ ರಾವ್ - ಅಜ್ಞಾತವಾಸಿ ಚಿತ್ರದ ಸ್ಟಿಲ್
Updated on

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ನಿರ್ದೇಶನದ ಜೊತೆಗೆ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಚಿತ್ರದ ಸಹ-ನಿರ್ಮಾಪಕರಾಗಿರುವ ಹೇಮಂತ್ ಎಂ ರಾವ್ ಇದೀಗ 'ಅಜ್ಞಾತವಾಸಿ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕನಾಗಿದ್ದಾರೆ. ಅವರ ದಿವಂಗತ ತಾಯಿಯ ಗೌರವಾರ್ಥವಾಗಿ, ಹೇಮಂತ್ ಅವರು ದಾಕ್ಷಾಯಣಿ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅಜ್ಞಾತವಾಸಿ ಚಿತ್ರವು ಇದರ ಮೊದಲ ಯೋಜನೆಯಾಗಿದೆ. ಚಿತ್ರವು ಏಪ್ರಿಲ್ 11 ರಂದು ತೆರೆಗೆ ಬರಲಿದೆ.

ಗುಲ್ಟು ಚಿತ್ರದ ಮೂಲಕ ಫೇಮಸ್ ಆಗಿರುವ ಜನಾರ್ದನ್ ಚಿಕ್ಕಣ್ಣ ನಿರ್ದೇಶನದ 'ಅಜ್ಞಾತವಾಸಿ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಾವನಾ ಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿದ್ದಾರೆ.

1997 ರಲ್ಲಿ ಮಲೆನಾಡು ಪ್ರದೇಶದಲ್ಲಿ ನಡೆದ ಘೋರ ಕೊಲೆಯಿಂದ ಸ್ಫೂರ್ತಿ ಪಡೆದಿರುವ ಜನಾರ್ದನ್ ಚಿಕ್ಕಣ್ಣ ಚಿತ್ರಕ್ಕೆ ಕಥೆಯನ್ನು ಬರೆದಿದ್ದಾರೆ. ನಿರ್ಮಾಪಕರ ಪ್ರಕಾರ, ಈ ಕೊಲೆ ರಹಸ್ಯವು ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ನೋಡಿರದ ಹೊಸ ಪ್ರಕಾರದ ಕಥೆಯನ್ನು ಹೊಂದಿದೆ.

ಅಜ್ಞಾತವಾಸಿ ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ಸಂಯೋಜನೆ, ಭರತ್ ಎಂಸಿ ಅವರ ಸಂಕಲನ ಮತ್ತು ಉಲ್ಲಾಸ್ ಹೈದೂರ್ ಅವರ ನಿರ್ಮಾಣ ವಿನ್ಯಾಸವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com