ದರ್ಶನ್ ಶತ್ರು ಸಂಹಾರ ಪೂಜೆ ಬೆನ್ನಲೇ ಶಕ್ತಿ ಪೂಜೆ ಮಾಡಿಸಿದ ಪವಿತ್ರಾ ಗೌಡ: ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ನನ್ನ ಮುಟ್ಟೋಕಾಗಲ್ಲ ಎಂದ ನಟಿ

ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ಅದು ನನ್ನನ್ನು ಮುಟ್ಟಲು ಸಾಧ್ಯ ಇಲ್ಲ. ಋಣಾತ್ಮಕತೆಯೇ ತುಂಬಿರುವ ಜಗತ್ತಿನಲ್ಲಿ ನಿಮ್ಮ ದೃಷ್ಟಿ ಪಾಸಿಟಿವಿಟಿಯಿಂದ ಮಿಂಚಲಿ.
Pavithra gowda
ಪವಿತ್ರಾ ಗೌಡ
Updated on

ಬೆಂಗಳೂರು: ನಟ ದರ್ಶನ್ ಅವರು ಕೇರಳದಲ್ಲಿ ಶತ್ರು ಸಂಹಾರ ಪೂಜೆ ನೆರವೇರಿಸಿದ ಬೆನ್ನಲ್ಲೇ ನಟಿ ಹಾಗೂ ಮಾಡಲೆ ಪವಿತ್ರಾ ಗೌಡ ಅವರು ಯುಗಾದಿ ಪ್ರಯುಕ್ತ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡಿಸಿದ್ದಾರೆ.

ಈ ಪೂಜೆಯ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ತಮ್ಮ ಹಿಂಬಾಲಕರಿಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಅಲ್ಲದೆ, ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ಅದು ನನ್ನನ್ನು ಮುಟ್ಟಲು ಸಾಧ್ಯ ಇಲ್ಲ. ಋಣಾತ್ಮಕತೆಯೇ ತುಂಬಿರುವ ಜಗತ್ತಿನಲ್ಲಿ ನಿಮ್ಮ ದೃಷ್ಟಿ ಪಾಸಿಟಿವಿಟಿಯಿಂದ ಮಿಂಚಲಿ ಎಂದು ಬರೆದಿದ್ದಾರೆ.

ಪವಿತ್ರಾ ಗೌಡ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಪವಿತ್ರಾ ಗೌಡ ಅವರ ಮೇಲೆ ಬಿದ್ದಿರಬಹುದಾದ ಆ ಕೆಟ್ಟ ದೃಷ್ಟಿ ಯಾರದ್ದು ? ಈ ಮೂಲಕ ಯಾರಿಗಾದರೂ ಪವಿತ್ರಾ ಗೌಡ ಸಂದೇಶ ನೀಡುತ್ತಿದ್ದಾರಾ ? ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ಹಲವರು ಪೋಸ್ಟ್ ಕುರಿತು ಟೀಕೆಗಳನ್ನೂ ಕೂಡ ಮಾಡುತ್ತಿದ್ದಾರೆ.

Pavithra gowda
'ನನ್ನ ಮುಂದಿನ ಜೀವನಕ್ಕೆ ತೊಂದರೆ ಆಗದಿರಲಿ'; ದರ್ಶನ್‌ಗೆ ನಾನೊಬ್ಬಳೆ​ ಪತ್ನಿ, ಪವಿತ್ರಾಗೌಡ ಅಲ್ಲ: ಪೊಲೀಸ್​ ಆಯುಕ್ತಗೆ ವಿಜಯಲಕ್ಷ್ಮಿ ಪತ್ರ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com