ಸತ್ಯ ಪ್ರಕಾಶ್ ನಿರ್ದೇಶನದ ಕಮರ್ಷಿಯಲ್ ಎಂಟರ್‌ಟೈನರ್‌ನಲ್ಲಿ ದೊಡ್ಮನೆ ಕುಡಿ ಧೀರೇನ್ ಆರ್ ರಾಜ್‌ಕುಮಾರ್!

ಆರ್‌ವಿ ಮಲ್ಟಿ ಸಿನೆಸ್ ಕ್ರಿಯೇಟರ್ಸ್ ನಿರ್ಮಿಸಿರುವ ಈ ಚಿತ್ರವು ಸತ್ಯ ಪ್ರಕಾಶ್ ಅವರ ಸಾಮಾನ್ಯ ಸೂತ್ರಬದ್ಧ ನಿರೂಪಣೆಗಳಿಗಿಂತ ಭಿನ್ನವಾಗಿದ್ದು, ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರವಾಗಿದೆ.
Dheeren and Satya Prakash
ಧೀರೇನ್ ಮತ್ತು ಸತ್ಯ ಪ್ರಕಾಶ್
Updated on

ರಾಮಾ ರಾಮಾ ರೇ ಮತ್ತು ಒಂದಲ್ಲ ಎರಡಲ್ಲ ಮುಂತಾದ ವಿಶಿಷ್ಟ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಡಿ ಸತ್ಯ ಪ್ರಕಾಶ್ ಇದೀಗ ತಮ್ಮ ಐದನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ನಟ ಧೀರೇನ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ನಟ ಧೀರೇನ್ ಇದೀಗ ತಮ್ಮ ಮೂರನೇ ಚಿತ್ರದಲ್ಲಿ ಸತ್ಯ ಪ್ರಕಾಶ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಆರ್‌ವಿ ಮಲ್ಟಿ ಸಿನೆಸ್ ಕ್ರಿಯೇಟರ್ಸ್ ನಿರ್ಮಿಸಿರುವ ಈ ಚಿತ್ರವು ಸತ್ಯ ಪ್ರಕಾಶ್ ಅವರ ಸಾಮಾನ್ಯ ಸೂತ್ರಬದ್ಧ ನಿರೂಪಣೆಗಳಿಗಿಂತ ಭಿನ್ನವಾಗಿದ್ದು, ಹೆಚ್ಚಿನ ಪ್ರೇಕ್ಷಕರನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾದ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರವಾಗಿದೆ. ಸಂದೀಪ್ ಸುಂಕದ್ ನಿರ್ದೇಶನದ ಪಬ್ಬಾರ್ ಚಿತ್ರವನ್ನು ಪೂರ್ಣಗೊಳಿಸಿದ ನಂತರ, ಹೊಸ ಯೋಜನೆಯಲ್ಲಿ ಧೀರೇನ್ ಪಾಲ್ಗೊಳ್ಳಲಿದ್ದಾರೆ.

ಕಥೆಯನ್ನು ನೋಡಿರುವ ನಟ ಶಿವರಾಜ್‌ಕುಮಾರ್ ಈ ಕಂಟೆಂಟ್‌ನಿಂದಾಗಿ ರೋಮಾಂಚನಗೊಂಡರು ಮತ್ತು ಈ ಯೋಜನೆಗೆ ತಮ್ಮ ಆಶೀರ್ವಾದ ನೀಡಿದರು ಎಂದು ಉದ್ಯಮದ ಮೂಲಗಳು ಬಹಿರಂಗಪಡಿಸುತ್ತವೆ. ಸತ್ಯ ಪ್ರಕಾಶ್‌ಗೆ, ಈ ಚಿತ್ರವು ಒಂದು ಮಹತ್ವದ ತಿರುವು, ಪರಿಚಿತ ಪ್ರದೇಶದಿಂದ ದೂರ ಸರಿದು ಕಮರ್ಷಿಯಲ್ ನಿರೂಪಣೆಯನ್ನು ಅಳವಡಿಸಿಕೊಳ್ಳುವತ್ತ ಅವರು ಹೆಜ್ಜೆ ಇಟ್ಟಿದ್ದಾರೆ. ಅದೇ ಸಮಯದಲ್ಲಿ ಅವರ ವಿಶಿಷ್ಟ ಕಥೆ ಹೇಳುವ ಶೈಲಿಯನ್ನು ಉಳಿಸಿಕೊಂಡಿದ್ದಾರೆ.

ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರತಂಡವು ಶೀಘ್ರದಲ್ಲೇ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com