
ಕಾಮಿಡಿ ನಟನಾಗಿ ಚಿತ್ರರಂಗದಲ್ಲಿ ಪ್ರೇಕ್ಷಕರನ್ನು ನಗಿಸಿದ್ದ ನಟ ಚಿಕ್ಕಣ್ಣ ಇದೀಗ ನಾಯಕನಾಗಿಯೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. 2024ರಲ್ಲಿ ತೆರೆಕಂಡ ಉಪಾಧ್ಯಕ್ಷ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದ ಚಿಕ್ಕಣ್ಣ ಯಶಸ್ಸು ಕಂಡರು. ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತು. ಅಂದಿನಿಂದ, ನಟ ಅತ್ಯಂತ ಅತ್ಯಂತ ಎಚ್ಚರಿಕೆಯಿಂದ ಸ್ಕ್ರಿಪ್ಟ್ಗಳನ್ನು ಆಯ್ದುಕೊಳ್ಳುತ್ತಿದ್ದಾರೆ.
ಸದ್ಯ 'ಲಕ್ಷ್ಮಿಪುತ್ರ' ಚಿತ್ರದಲ್ಲಿ ಬ್ಯುಸಿಯಾಗಿರುವ ಚಿಕ್ಕಣ್ಣ ಈಗಾಗಲೇ ತಮ್ಮ ಮೂರನೇ ಯೋಜನೆಗೆ ಸಹಿ ಹಾಕಿದ್ದಾರೆ. ಈ ಬಾರಿ, ಅವರು ಇದುವರೆಗೆ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವು ವಿಶಿಷ್ಟವಾದ ದೇಸಿ ಪರಿಮಳವನ್ನು ಹೊಂದಿರುತ್ತದೆ. ಅಯೋಗ್ಯ ಮತ್ತು ಮದಗಜ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಮಹೇಶ್ ಕುಮಾರ್ ಅವರೊಂದಿಗೆ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಅಯೋಗ್ಯ 2 ಪೂರ್ಣಗೊಳ್ಳುವ ಹಂತದಲ್ಲಿದ್ದು, ಮಹೇಶ್ ತಮ್ಮ ನಾಲ್ಕನೇ ನಿರ್ದೇಶನದ ಚಿತ್ರಕ್ಕೆ ಮುಂದಾಗುತ್ತಿದ್ದಾರೆ. ಈ ಚಿತ್ರವು ನಾಯಕನಾಗಿ ಚಿಕ್ಕಣ್ಣ ಅವರ ಮೂರನೇ ಕಮರ್ಷಿಯಲ್ ಎಂಟರ್ಟೈನರ್ ಆಗಲಿದೆ.
ಈ ಚಿತ್ರವನ್ನು ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಲಿದ್ದಾರೆ. ಈ ಹಿಂದೆ ವಿನೋದ್ ಪ್ರಭಾಕರ್ ಅವರ ಫೈಟರ್ ಚಿತ್ರವನ್ನು ನಿರ್ಮಿಸಿದ್ದ ಸೋಮಶೇಖರ್ ಇದೀಗ ಈ ಯೋಜನೆಯನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಅಕ್ಟೋಬರ್ನಲ್ಲಿ ಔಪಚಾರಿಕ ಮುಹೂರ್ತದೊಂದಿಗೆ ಸೆಟ್ಟೇರಲಿದ್ದು, ಆಗ ಶೀರ್ಷಿಕೆಯನ್ನು ಸಹ ಅನಾವರಣಗೊಳಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಈಮಧ್ಯೆ, ಈ ಯೋಜನೆಗೆ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ, ಮಾಸ್ತಿ, ರಘು ನಿಡುವಳ್ಳಿ ಮತ್ತು ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ ಮತ್ತು ಕಲಾ ನಿರ್ದೇಶನವನ್ನು ಮೋಹನ್ ಬಿ ಕೆರೆ ನಿರ್ವಹಿಸಿದ್ದಾರೆ. ಚಿತ್ರಕಥೆ ಪೂರ್ಣಗೊಂಡು, ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ.
Advertisement