

SS ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಏಳು ವರ್ಷಗಳ ನಂತರ ಭಾರತೀಯ ಸಿನಿಮಾಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಚಿತ್ರ ಒಪ್ಪಿಕೊಳ್ಳುವ ಮುನ್ನಾ ಅವರು ರಾಜಮೌಳಿಗೆ ಒಂದು ಪ್ರಮುಖವಾದ ರಿಕ್ವೆಸ್ಟ್ ಮಾಡಿದ್ರಂತೆ. ಅದು ನಟ ಮಹೇಶ್ ಬಾಬು ಮೇಲೂ ಅನಿರೀಕ್ಷಿತ ಪರಿಣಾಮ ಬೀರಿದ ಬಗ್ಗೆ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.
ಹೌದು. ಡ್ಯಾನ್ಸ್ ಮೂಲಕ ಭಾರತೀಯ ಪ್ರೇಕ್ಷಕರೊಂದಿಗೆ ಮತ್ತೆ ಕನೆಕ್ಟ್ ಆಗಲು ಉತ್ಸುಕರಾಗಿದ್ದ ಪ್ರಿಯಾಂಕಾ ಚೋಪ್ರಾ, ವಾರಣಾಸಿ ಆಫರ್ ಬಂದ ಕೂಡಲೇ ರಾಜಮೌಳಿಯೊಂದಿಗೆ ಮಾತನಾಡುವಾಗ, ಆರು ವರ್ಷಗಳಿಂದ ಸಿನಿಮಾ ಮಾಡಿಲ್ಲ. ಹೀಗಾಗಿ ನನಗೆ ಒಂದು ಡ್ಯಾನ್ಸ್ ಮಾಡಿಸಿ ಅಂತಾ ಮನವಿ ಮಾಡಿದ್ರಂತೆ. ತದನಂತರ ನಾನು ಹಾಗೆ ಕೇಳಬಾರದಿತ್ತು. ಏಕೆಂದರೆ ಇಬ್ಬರು ಸೇರಿ ಡ್ಯಾನ್ಸ್ ಮಾಡುವ ಅಗತ್ಯವಿದ್ದರಿಂದ ಆ ರೀತಿ ಹೇಳಬಾರದಿತ್ತು ಎಂದರು.
ಮಹೇಶ್ ಬಾಬು ಮಾತನಾಡಿ, ಇದು ಸೆನ್ಸೆಷನಲ್. ಈಗಾಗಲೇ ಒಂದು ಹಾಡನ್ನು ಚಿತ್ರೀಕರಿಸಿದ್ದು, ಅದು ನಮ್ಮ ಮನಸ್ಸಿನಲ್ಲಿ ಪ್ಲೇ ಆಗುತ್ತಲೇ ಇರುತ್ತದೆ. ಪ್ರಿಯಾಂಕಾ ಅದನ್ನು ಎಲ್ಲಾ ಸಮಯದಲ್ಲೂ ಹಾಡುತ್ತಲೇ ಇರುತ್ತಾರೆ. ಆಕೆ ಡ್ಯಾನ್ಸ್ ಮಾಡಲು ಬಯಸಿದ್ದರಿಂದ ಆ ಹಾಡು ಮಾಡಲಾಗಿದೆ ಎಂದು ಹೇಳಿದರು.
ಬಾಹುಬಲಿ, ಆರ್ ಆರ್ ಆರ್ ಖ್ಯಾತಿಯ ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮಂದಾಕಿನಿ, ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಮಹೇಶ್ ಬಾಬು ರುದ್ರನಾಗಿ ರಾಮನ ಪಾತ್ರದಲ್ಲಿ ಪಾತ್ರದಲ್ಲಿ ನಟಿಸುತ್ತಿರುವುದಾಗಿ ನಿರ್ದೇಶಕರು ಖಚಿತಪಡಿಸಿದ್ದಾರೆ. ಏಪ್ರಿಲ್ 7, 2027 ರಂದು ವಾರಣಾಸಿಯನ್ನು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
Advertisement