ಎಲ್ಲರೂ ಮಲಗಿದ ಮೇಲೆ ವಿಜಯ್‌ರನ್ನು ಗುಟ್ಟಾಗಿ ಭೇಟಿಯಾಗುತ್ತಾರೆ: ಶೀಘ್ರದಲ್ಲೇ ತ್ರಿಷಾ DCM ಆಗ್ತಾರೆ?

ನಟಿ ತ್ರಿಷಾ ಅವರನ್ನು ಶೀಘ್ರದಲ್ಲೇ ಉಪಮುಖ್ಯಮಂತ್ರಿಯಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಆರ್.ಪಿ ಉದಯಕುಮಾರ್ ಟೀಕಿಸಿದ್ದಾರೆ. ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಮಧ್ಯರಾತ್ರಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸುವ ಅವಕಾಶ ತ್ರಿಷಾಗೆ ಮಾತ್ರ ಇದೆ ಎಂದು ಟೀಕಿಸಿದರು.
Vijay, Trisha
ವಿಜಯ್, ತ್ರಿಷಾ
Updated on

ನಟಿ ತ್ರಿಷಾ (Trisha) ಅವರನ್ನು ಶೀಘ್ರದಲ್ಲೇ ಉಪಮುಖ್ಯಮಂತ್ರಿಯಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಆರ್.ಪಿ ಉದಯಕುಮಾರ್ ಟೀಕಿಸಿದ್ದಾರೆ. ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿಜಯ್ (Vijay) ಅವರೊಂದಿಗೆ ಮಧ್ಯರಾತ್ರಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸುವ ಅವಕಾಶ ತ್ರಿಷಾಗೆ ಮಾತ್ರ ಇದೆ ಎಂದು ಟೀಕಿಸಿದರು.

ಇನ್ನು ತ್ರಿಷಾರನ್ನು ತಮಿಳುನಾಡಿನ ಉಪಮುಖ್ಯಮಂತ್ರಿ ಮಾಡಿದರೂ ಯಾರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಆರ್.ಪಿ ಉದಯಕುಮಾರ್ ಲೇವಡಿ ಮಾಡಿದರು. ಅಘೋಷಿತ ರಜೆ ಘೋಷಿಸಲಾಗಿದ್ದು ವಿಜಯ್ ಮತ್ತು ಸಚಿವರು 'ಜನನಾಯಗನ್' ಚಿತ್ರವನ್ನು ವೀಕ್ಷಿಸಲು ತೆರಳಿದ್ದರು. ಇದು ಆಡಳಿತ ಯಂತ್ರವೇ ತಮ್ಮ ಕೆಲಸವನ್ನು ಬದಿಗಿಟ್ಟು ಸಿನಿಮಾ ನೋಡಲು ಹೋಗಿದೆ ಎಂದು ಲೇವಡಿ ಮಾಡಿದರು. ಮಾಜಿ ಸಚಿವರ ಈ ಹೇಳಿಕೆ ತಮಿಳುನಾಡು ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣ ಆಗಿದೆ.

Vijay, Trisha
ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್ ನಟನೆಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾರುಲ್ ಯಾದವ್ ರೀ ಎಂಟ್ರಿ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com