ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಅಥರ್ವ ನಟನೆಯ ತಮಿಳು ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ!

ಕನ್ನಡ ನಟ ಉಪೇಂದ್ರ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸುತ್ತಿರುವ ಚಿತ್ರದೊಂದಿಗೆ ತಮಿಳು ಚಿತ್ರರಂಗಕ್ಕೆ ಮರಳಲಿದ್ದಾರೆ ಎಂದು ಆಪ್ತ ಮೂಲಗಳು ಸಿನಿಮಾ ಎಕ್ಸ್ ಪ್ರೆಸ್ ಗೆ ದೃಢಪಡಿಸಿವೆ.
Karthik Subbaraj, Upendra, Atharvaa
ಕಾರ್ತಿಕ್ ಸುಬ್ಬರಾಜ್, ಉಪೇಂದ್ರ ಮತ್ತು ಅಥರ್ವ
Updated on

ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಇನ್ನೂ ಹೆಸರಿಡದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಲಿದ್ದಾರೆ, ಆಸ್ಕರ್ ಪ್ರಶಸ್ತಿ ವಿಜೇತ ಗುಣೀತ್ ಮೋಂಗಾ ಸಂಗೀತ ನಿರ್ದೇಶನವಿದೆ. ನಿರ್ದೇಶಕರು ಅಥರ್ವ ನಾಯಕನಾಗಿರುವ ಮತ್ತೊಂದು ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದು ಹೊಸ ವರದಿಗಳು ಹೊರಬಿದ್ದಿವೆ.

ಕನ್ನಡ ನಟ ಉಪೇಂದ್ರ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸುತ್ತಿರುವ ಚಿತ್ರದೊಂದಿಗೆ ತಮಿಳು ಚಿತ್ರರಂಗಕ್ಕೆ ಮರಳಲಿದ್ದಾರೆ ಎಂದು ಆಪ್ತ ಮೂಲಗಳು ಸಿನಿಮಾ ಎಕ್ಸ್ ಪ್ರೆಸ್ ಗೆ ದೃಢಪಡಿಸಿವೆ. ಈ ಪ್ರಾಜೆಕ್ಚ್ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬರಬೇಕಿದೆ. ಚಿತ್ರದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣ ಮುಂದಿನ ತಿಂಗಳು ಕಾರ್ತಿಕ್ ಸುಬ್ಬರಾಜ್ ಅವರ ಸ್ಟೋನ್ ಬೆಂಚ್ ಬ್ಯಾನರ್ ಬೆಂಬಲದೊಂದಿಗೆ ಪ್ರಾರಂಭವಾಗಲಿದೆ.

ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಉಪೇಂದ್ರ 36 ವರ್ಷಗಳ ಚಿತ್ರರಂಗದ ವೃತ್ತಿಜೀವನದ ಅನುಭವ ಹೊಂದಿದ್ದಾರೆ. ಅವರು ವಿಶಾಲ್ ಅಭಿನಯದ ಸತ್ಯಂ (2008) ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗೆ ರಜನಿಕಾಂತ್ ಅವರ ಕೂಲಿ (2025) ಸಿನಿಮಾದಲ್ಲಿ ಕಾಣಿಸಿಕೊಂಡರು. ಅವರು ಕೊನೆಯದಾಗಿ ಶಿವರಾಜಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ 45 (2025) ನಲ್ಲಿ ನಟಿಸಿದ್ದರು.

ಕಾರ್ತಿಕ್ ಸುಬ್ಬರಾಜ್ ಅವರ ಕೊನೆಯ ಬಿಡುಗಡೆ ಸೂರ್ಯ ನಟನೆಯ ರೆಟ್ರೋ ಆಗಿತ್ತು (2025). ಶಿವಕಾರ್ತಿಕೇಯನ್ ಅಭಿನಯದ ಪರಾಶಕ್ತಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅಥರ್ವ ಇಧಯಂ ಮುರಳಿ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.

Karthik Subbaraj, Upendra, Atharvaa
22 ವರ್ಷಗಳ ಬಳಿಕ 'ಸೈನಿಕ' ಮತ್ತೆ ರಣರಂಗಕ್ಕೆ; 'ಸೈನಿಕ 2' ಮೂಲಕ ಸಿ.ಪಿ ಯೋಗೀಶ್ವರ್ ಕಂಬ್ಯಾಕ್?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com