ಸೂರಿ ನಿರ್ದೇಶನದ 'ಕಾಗೆ ಬಂಗಾರ' ಚಿತ್ರಕ್ಕೆ 'ನಡುವೆ ಅಂತರವಿರಲಿ' ಖ್ಯಾತಿಯ ಸೂರ್ಯ ಪ್ರಖ್ಯಾತ್ ಎಂಟ್ರಿ; ರಿತನ್ಯಾ ವಿಜಯ್ ನಾಯಕಿ!

ನಟ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ವಿಜಯ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Rithanya Vijay - Surya Prakhyath - Director Suri
ರಿತನ್ಯಾ ವಿಜಯ್ - ಸೂರ್ಯ ಪ್ರಖ್ಯಾತ್ - ನಿರ್ದೇಶಕ ಸೂರಿ
Updated on

ದೀರ್ಘಕಾಲದ ವಿಳಂಬ ಮತ್ತು ಪಾತ್ರವರ್ಗದಲ್ಲಿನ ಬದಲಾವಣೆಗಳ ನಂತರ, ಸೂರಿ ಅವರ 'ಕಾಗೆ ಬಂಗಾರ' ಚಿತ್ರವು ಅಂತಿಮವಾಗಿ ಚಿತ್ರೀಕರಣದ ಹಂತಕ್ಕೆ ತಲುಪಿದೆ. ಈ ಯೋಜನೆಗೆ ಸಂಬಂಧಿಸಿದ ಮೂಲಗಳ ಪ್ರಕಾರ, ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.

'ನಡುವೆ ಅಂತರವಿರಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಗೆ ಪದಾರ್ಪಣೆ ಮಾಡಿದ್ದ ಮತ್ತು ಇತ್ತೀಚೆಗೆ 'ಜೆಸಿ - ದಿ ಯೂನಿವರ್ಸಿಟಿ' (JC – The University) ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಸೂರ್ಯ ಪ್ರಖ್ಯಾತ್ ಇದೀಗ 'ಕಾಗೆ ಬಂಗಾರ' ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.

ನಟ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ವಿಜಯ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಡೇಶಾ ಕೆ. ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಚಿತ್ರದ ಮೂಲಕ ರಿತನ್ಯಾ ನಟನೆಗೆ ಪದಾರ್ಪಣೆ ಮಾಡಿದ್ದರು. ಇದೀಗ 'ಕಾಗೆ ಬಂಗಾರ' ಅವರ ಪೂರ್ಣಪ್ರಮಾಣದ ಚಿತ್ರವಾಗಲಿದೆ.

'ಕಾಗೆ ಬಂಗಾರ' ಚಿತ್ರವು ಸೂರಿ ಅವರ 'ಕೆಂಡಸಂಪಿಗೆ' ಮತ್ತು 'ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರಗಳ ತುದಿಗಳನ್ನು ಒಟ್ಟಿಗೆ ತರಲಿದೆ. ಈ ಸಂಪರ್ಕವು ಪ್ರಶಾಂತ್ ಸಿದ್ಧಿ ಅವರನ್ನು ಮತ್ತೆ ಪ್ರಮುಖ ಪಾತ್ರವೊಂದಕ್ಕೆ ಕರೆತರುತ್ತದೆ. ಅವರ ಪಾತ್ರವನ್ನು 'ಕೆಂಡಸಂಪಿಗೆ' ಚಿತ್ರದಿಂದ ಮುಂದುವರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ 'ಕಾಗೆ ಬಂಗಾರ'ದಲ್ಲಿ ಅವರ ಉಪಸ್ಥಿತಿಯು ನಿರೀಕ್ಷೆ ಮೂಡಿಸಿದೆ. ಅಲ್ಲದೆ, ಹಿಂದಿನ ಎರಡು ಚಿತ್ರಗಳ ಇನ್ನೂ ಹಲವು ನಟರು ಈ ಯೋಜನೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ.

Rithanya Vijay - Surya Prakhyath - Director Suri
ಧ್ರುವ ಸರ್ಜಾ ನಟಿಸಬೇಕಿದ್ದ ಚಿತ್ರದಿಂದ ಹೊರನಡೆದ ನಿರ್ದೇಶಕ ಸೂರಿ; 'ಕಾಗೆ ಬಂಗಾರ'ಕ್ಕೆ ಮರುಜೀವ ನೀಡುವ ಸುಳಿವು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com