

ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಹೋಗಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತೆ ದೊಡ್ಮನೆಯಿಂದ ಹೊರಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವೊಂದರಲ್ಲಿ ಓಂ ಪ್ರಕಾಶ್ ರಾವ್ ಅವರ ಕಾಲಿಗೆ ತೀವ್ರ ಗಾಯವಾಗಿತ್ತು. ಇದೀಗ ಅದೇ ಕಾಲಿನಲ್ಲಿ ಮತ್ತೆ ಊತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಕೆಲ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯಲ್ಲಿ ಹಾಗೂ ಕೆಲ ಸ್ಪರ್ಧಿಗಳನ್ನು ವಿಮಾನದಲ್ಲಿ ಇರಿಸಲಾಗಿತ್ತು. ಓಂ ಪ್ರಕಾಶ್ ರಾವ್ ಅವರನ್ನು ವಿಮಾನದಲ್ಲಿ ಇರಿಸಲಾಗಿದ್ದು ಅಲ್ಲಿ ವಿಮಾನದ ಸೀಟುಗಳ ಮೇಲೆ ಇರಬೇಕಾಗಿತ್ತು. ಅಲ್ಲದೆ ಬಿಗ್ಬಾಸ್ ಮನೆಯಲ್ಲಿ ನಡೆಯುತ್ತಿರುವ ಟಾಸ್ಕ್ಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದರಿಂದ ಓಂ ಪ್ರಕಾಶ್ ರಾವ್ ಅವರ ಕಾಲಿನಲ್ಲಿ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಓಂ ಪ್ರಕಾಶ್ ರಾವ್ ಅವರಿಗೆ ಚಿಕಿತ್ಸೆ ಹಾಗೂ ವೈದ್ಯಕೀಯ ತಪಾಸಣೆ ನಡೆಯುತ್ತಿದೆ. ಚಿಕಿತ್ಸೆ ಪಡೆದುಕೊಂಡ ಬಳಿಕ ಮತ್ತೆ ಬಿಗ್ಬಾಸ್ ಮನೆಗೆ ಮರಳುವ ಸಾಧ್ಯತೆ ಇದೆ.
ಬಿಗ್ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ಎಲಿಮನೇಷನ್ ಪ್ರಕ್ರಿಯೆ ನಡೆದಿದ್ದು. ಸ್ಪರ್ಧಿ ಪ್ರಥಮಾ ಪ್ರಸಾದ್ ದೊಡ್ಮನೆ ಪ್ರವೇಶಿಸದೇ ವಿಮಾನದ ಜರ್ನಿಯಲ್ಲೇ ಒಂದು ವಾರವಿದ್ದು ತಮ್ಮ ಬಿಗ್ಬಾಸ್ ಪ್ರಯಾಣ ಮುಗಿಸಿ ಹೊರಬಂದಿದ್ದಾರೆ. ʻಬಿಗ್ ಬಾಸ್ ಕನ್ನಡʼದ ಇತಿಹಾಸದಲ್ಲೇ ಮನೆಯೊಳಗೆ ಕಾಲಿಡದೇ ಮೊದಲ ವಾರದಲ್ಲೇ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಎಂಬ ದಾಖಲೆಗೆ ಪ್ರಥಮಾ ಪ್ರಸಾದ್ ಪಾತ್ರರಾಗಿದ್ದಾರೆ.