ಇನ್ನುಳಿದಂತೆ ಸಿನೆಮಾದಲ್ಲಿ ನಾಯಕನಟನ ಹೀರೋಯಿಸಂನ ವೈಭವಕ್ಕಾಗಿಯೇ ಕಥೆ ಹೆಣೆದಿರುವಂತೆ ಕಂಡು, ಒಂದು ಕಡೆ ಒಡವೆ ಅಂಗಡಿಯ ಮಾಲೀಕನಿಗೂ, ಮತ್ತೊಂದು ಕಡೆ ಪೊಲೀಸರಿಗೂ ವಿಷಯ ತಿಳಿಸಿ ಕನ್ನ ಹಾಕಿ ಚಮತ್ಕಾರದಿಂದ ತಪ್ಪಿಸಿಕೊಂಡು, ಕೆಡುಕರನ್ನೇ ಬಲೆಗೆ ಬೀಳಿಸುವ ವ್ಯೂಹಕ್ಕೆ ನಗಬೇಕೋ, ಪಂಟರ ವಿಷಯ ನಮಗೇಕಪ್ಪಾ ಎಂದು ಕಡೆಗಣಿಸಬೇಕಾ ಎಂಬ ಗೊಂದಲವನ್ನು ಪ್ರೇಕ್ಷಕರಲ್ಲಿ ಯಶಸ್ವಿಯಾಗಿ ಮೂಡಿಸುತ್ತದೆ ಸಿನೆಮಾ. ಒಂದು ಹಂತಕ್ಕೆ ಯಾವುದೋ ರೋಚಕ ಕಥೆಯನ್ನು ಹೇಳಲು ನಿರ್ದೇಶಕ ಹೊರಟಿದ್ದಾರೆ ಎಂದೆನಿಸಿದರೂ, ಕೊನೆಗೆ ಚಮತ್ಕಾರತೆಯನ್ನು ಮೇಲು ಮಾಡಿ ಜಾಳು ಜಾಳಾದ ವಿಜೃಂಭಣೆಯನ್ನು ಮೆರೆದಿರುವುದಕ್ಕೆ ನಿರಾಶೆ ಮೂಡುತ್ತದೆ. 'ಪಂಟ'ನ ತಂತ್ರಗಾರಿಕೆಯ ಕನ್ನದ ಕಾರ್ಯಗಳು ಸಮಯದಲ್ಲಿ ಹಿಗ್ಗಿದಂತೆ ಭಾಸವಾಗಿ ಸಮಯ ಎಂಬುದು ಸಾಪೇಕ್ಷ ಎಂಬುದನ್ನು ಸಾಬೀತುಪಡಿಸುತ್ತವೆ.