ಲಾಕ್ ಡೌನ್ ಸಡಿಲ ಆಗುತ್ತಿದ್ದಂತೆ ಸಮಾಜದಲ್ಲಿ ಮತ್ತೆ ವಾಣಿಜ್ಯ ಚಟುವಟಿಕೆಗಳು ಬಹಳಷ್ಟು ಹೆಚ್ಚಾಗಿವೆ ಎನ್ನುವ ವರದಿಯನ್ನ ನಾವು ಕೇಳುತ್ತಿದ್ದೇವೆ. ನಮ್ಮದು ಅತ್ಯಂತ ಜನ ನಿಭಿಡ ದೇಶ. ನಾವು ಹೆಚ್ಚು ಕಾಲ ನಮ್ಮ ಪರಿಸ್ಥಿತಿಯನ್ನ ಹಳಿಯುತ್ತಾ ಕೂರುವ ಸ್ಥಿತಿಯಲಿಲ್ಲ.
ಕೊರೋನದಿಂದ ಜೀವಭಯ ಎಷ್ಟಿದೆಯೋ ಅದರಷ್ಟೇ ಅಥವಾ ಒಂದಷ್ಟು ಹೆಚ್ಚು ಅಂಶ ಬದುಕನ್ನ ಕಟ್ಟಿಕೊಳ್ಳದಿದ್ದರೆ ಮುಂದೇನು? ಎನ್ನುವ ಭಯ ಕೂಡ ಕಾಡುತ್ತಿದೆ. ಬಹಳಷ್ಟು ಜನರಿಗೆ ಕೊರೋನದಿಂದ ಸಾಯದಿದ್ದರೆ ಆರ್ಥಿಕ ಕಾರಣಗಳಿಂದ ಸಾಯುವುದು ಖಂಡಿತ ಎನ್ನುವಂತಾಗಿದೆ. ಇಂದಿನ ಕಾಲಘಟ್ಟದಲ್ಲಿ ಕೇವಲ ಊಟ, ಬಟ್ಟೆ ಇದ್ದರೆ ಅಲ್ಲಿಗೆ ಸಾಕು ಎನ್ನುವಂತಿಲ್ಲ. ಹಿಂದಿನ ದಿನಗಳಲ್ಲಿ ಯಾವುದನ್ನ ಐಷಾರಾಮಿ ಎಂದು ಕರೆಯಲಾಗುತ್ತಿತ್ತು ಅವುಗಳು ಇಂದಿನ ದಿನದಲ್ಲಿ ಅಗತ್ಯ ವಸ್ತು ಎನ್ನಿಸಿಕೊಂಡಿವೆ. ಹೀಗಾಗಿ ಬೇಕೋ ಬೇಡವೋ ಲಾಕ್ ಡೌನ್ ಮುಗಿಯುತ್ತಿದ್ದಂತೆ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳು ಹೊಸ ಹುರುಪಿನಿಂದ ಶುರವಾಗಿರುವುದು ಸತ್ಯ. ಅದಕ್ಕೆ ಪೂರಕವಾಗುವಂತಹ ಹಲವಾರು ನಿದರ್ಶನಗಳನ್ನ ನಾವು ನೋಡಬಹುದು.
ಹೀಗೆ ಇನ್ನೂ ಹತ್ತಾರು ವಲಯಗಳಲ್ಲಿ ಕೂಡ ಒಂದಷ್ಟು ಆಶಾಭಾವವನ್ನ ನಾವು ಕಾಣಬಹುದು. ಆದರೆ ಈ ಬೇಡಿಕೆಯ ಸ್ಥಿತಿ ಎಷ್ಟು ದಿನ ಇರುತ್ತದೆ ಎನ್ನುವುದು ಇಂದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ. ಇದಕ್ಕೆ ಪ್ರಮುಖ ಕಾರಣಗಳನ್ನ ನಾವು ಹೀಗೆ ಪಟ್ಟಿ ಮಾಡಬಹುದು.
ಇವುಗಳ ಜೊತೆಗೆ ನಮ್ಮ ಸಮಾಜದಲ್ಲಿ ಅರ್ಧ ಭಾಗವನ್ನ ಆವರಿಸಿಕೊಂಡಿರುವ ಸೇವಾ ಕ್ಷೇತ್ರಗಳು ಇನ್ನೂ ಪೂರ್ಣವಾಗಿ ಮಾರುಕಟ್ಟೆಗೆ ತೆರೆದು ಕೊಳ್ಳಬೇಕಿದೆ. ಹೋಟೆಲ್ ಇಂಡಸ್ಟ್ರಿ ಗ್ರಾಹಕರಿಗೆ ತೆರೆದುಕೊಂಡಿದೆ. ಆದರೆ ತನ್ನ ಹಿಂದಿನ ಹೊಳಪನ್ನ ಕಂಡುಕೊಳ್ಳಲು ಬಹಳಷ್ಟು ಸಮಯವನ್ನ ತೆಗೆದುಕೊಳ್ಳುತ್ತದೆ. ಇನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬೆವರು ಹರಿಸುವುದು ಬಾಕಿಯಿದೆ. ರಾಷ್ಟೀಯ ಪ್ರವಾಸ ಹಾಗೂ ಹೀಗೂ ಒಂದಷ್ಟು ಬಿರುಸು ಪಡೆದುಕೊಳ್ಳಬಹುದು, ಆದರೆ ಸದ್ಯದ ಮಟ್ಟಿಗೆ ಅಂತರರಾಷ್ಟ್ರೀಯ ಪ್ರಯಾಣಗಳಿಗೆ ಸಾಕಷ್ಟು ಅಡೆತಡೆಯಿದೆ. ಲಸಿಕೆ, ಪಾಸ್ಪೋರ್ಟ್ ವಿತರಣೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಮ್ಮತ, ಸಹಮತದ ಕೊರತೆಯನ್ನ ನಾವು ಕಾಣಬಹುದು. ಹೀಗಾಗಿ ಮೇಲ್ನೋಟಕ್ಕೆ ಒಂದಷ್ಟು ಕಾರ್ಯಕ್ಷೇತ್ರಗಳು ಬೇಡಿಕೆಯನ್ನ ಮರಳಿ ಪಡೆದಂತೆ ಕಂಡರೂ, ಎಲ್ಲವೂ ಸಹಜ ಸ್ಥಿತಿಗೆ ಮರಳು ಇನ್ನಷ್ಟು ಸಮಯ ಬೇಡುತ್ತದೆ.
ಕೊನೆಮಾತು: ನಮ್ಮ ಸಮಾಜ ಹಿಂದೆಂದಿಗಿಂತಲೂ ಇಂದು ಅತ್ಯಂತ ನಿಖರವಾಗಿ ಇಬ್ಭಾಗವಾಗಿದೆ. ಸಮಾಜದ ಒಂದು ವರ್ಗದ ಜನ ವ್ಯವಸ್ಥೆಯಲ್ಲಿ ಪೂರ್ಣ ಕುಸಿತ ಉಂಟಾಗಿದೆ ಎನ್ನುವ ಕೂಗನ್ನ ಹರಿಯಬಿಡುತ್ತಿದ್ದರೆ, ಉಳಿದರ್ಧ ಜನ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎನ್ನುವಂತೆ ಕೂಗಾಡುತ್ತಿದ್ದಾರೆ. ನಾವು ಯಾವುದನ್ನೇ ಆಗಲಿ ಕೇವಲ ಅಂಕಿ-ಸಂಖ್ಯೆಯನ್ನ ನೋಡಿ, ಇದು ಸರಿ ಅಥವಾ ಇದು ತಪ್ಪು ಎಂದು ಹೇಳಲು ಆಗುವುದಿಲ್ಲ. ಉದಾಹರಣೆಗೆ ಎಫ್ಎಂಸಿಜಿ ಯಲ್ಲಿ ಬೇಡಿಕೆ ಹೆಚ್ಚಾಗಿರುವುದು ಸುಳ್ಳಲ್ಲ. ಅಂಕಿ-ಅಂಶ ನೋಡಿ ಹೌದು ಆರ್ಥಿಕತೆ ಸರಿದಾರಿಗೆ ಬರುತ್ತಿದೆ ಎನ್ನಬಹುದು. ಆದರೆ ಅದು ಪೂರ್ಣ ಪ್ರಮಾಣದ ಚೇತರಿಕೆಯೇ ಅಲ್ಲವೇ ಎನ್ನುವುದನ್ನ ವಿಶ್ಲೇಷಣೆ ಮಾತ್ರ ತಿಳಿಸಬಲ್ಲದು. ಹಾಗೆಯೇ ಎಲ್ಲವೂ ಕುಸಿದಿದೆ ಎನ್ನುವರಿಗೆ, ಇಂತಹ ದುರಿತ ಕಾಲದಲ್ಲಿ ಕೂಡ ಭಾರತದ ಕಾಣುತ್ತಿರುವ ಅಭಿವೃದ್ಧಿ ವೇಗ, ಲಸಿಕೆ ನೀಡುತ್ತಿರುವ ಪ್ರಮಾಣ ತಿಳಿಸಿ ಹೇಳಬೇಕಿದೆ. ಭಾರತದಂತಹ ಅತಿ ದೊಡ್ಡ ದೇಶವನ್ನ ಸರಿದೂಗಿಸಿಕೊಂಡು ಹೋಗುವುದು ಸುಲಭದ ಕೆಲವಲ್ಲ. ಇಬ್ಭಾಗವಾದ ಸಮಾಜದ ಎರಡೂ ಬದಿಯ ತರ್ಕ, ವಾದ ವಿವಾದಗಳ ನಡುವಿನಲ್ಲಿ ಸತ್ಯ, ಅಥವಾ ಫ್ಯಾಕ್ಟ್ ಕೇಳುವರಿಲ್ಲದೆ ಅನಾಥವಾಗಿರುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement