ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಏರುಗತಿಯಲ್ಲಿರುವುದು ಇಂದಿಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ಭಾರತದಲ್ಲಿ ಕೂಡ ಹಣದುಬ್ಬರ ಹೆಚ್ಚಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಮಕ್ಕಳು 16,18,20 ವರ್ಷಕ್ಕೆ ಕಾಲಿರಿಸುತ್ತಿದ್ದಂತೆ ಹೆತ್ತವರ ತೊರೆದು ತಮ್ಮ ಜೀವನ ಕಟ್ಟಿಕೊಳ್ಳುವುದು ಕಾಣುತ್ತೇವೆ . ಭಾರತದಲ್ಲಿ ಇನ್ನೊಂದೈದು ವರ್ಷ ಅಂದರೆ 25 ರ ನಂತರ ಈ ಕ್ರಿಯೆಯನ್ನ ನಾವು ಕಾಣಬಹುದು.
ಪಾಶ್ಚಾತ್ಯ ದೇಶಗಳಲ್ಲಿ ಈ ಕ್ರಿಯೆಗೆ ಇದೀಗ ಹಣದುಬ್ಬರ ಪೆಟ್ಟು ಕೊಟ್ಟಿದೆ. ಯುವಕ/ಯುವತಿಯರು ತಮ್ಮ ಹೆತ್ತವರನ್ನ ಬಿಟ್ಟು ಹೋಗುವ ಕ್ರಿಯೆ ನಿಧಾನವಾಗಿದೆ. ಹೊರ ಹೋದವರಲ್ಲಿ ಕೂಡ ಬಹುತೇಕರು ಮತ್ತೆ ಮರಳಿ ತಮ್ಮ ಹೆತ್ತವರ ಗೂಡನ್ನ ಸೇರಿಕೊಳ್ಳುತ್ತಿದ್ದಾರೆ. ಮದುವೆಯಾಗದ ಯುವ ಜನತೆ ತಮ್ಮ ಹೆತ್ತವರ ಜೊತೆಯಲ್ಲಿದ್ದು ಹೊರಗಡೆ ತಮ್ಮ ಸಂಗಾತಿಯನ್ನ ಭೇಟಿ ಮಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಹೀಗೆ ಅವರು ಮರಳಿ ಹೆತ್ತವರ ಮೇಲಿನ ಪ್ರೀತಿಯಿಂದ ಹೋದದ್ದಲ್ಲ! ಇಂದಿಗೆ ಅವರು ಗಳಿಸುತ್ತಿರುವ ಆದಾಯದಲ್ಲಿ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ ಎನ್ನುವುದು ತಿಳಿದು ಬರುತ್ತಿರುವ ವಿಷಯ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಕೆಲಸದ ದಿನಗಳಲ್ಲಿ ರೆಸ್ಟುರೆಂಟ್ನಲ್ಲಿ ಸೇವಿಸುತ್ತಿದ್ದ ಜನರು ಇದೀಗ ಎಲ್ಲವನ್ನೂ ಮನೆಯಲ್ಲಿ ತಯಾರಿಸಿ ತಿನ್ನುವುದು ಮತ್ತು ಕೆಲಸದ ಜಾಗಕ್ಕೆ ಬುತ್ತಿ ಕಟ್ಟಿಕೊಂಡು ಹೋಗುವ ಹಳೆಯ ಸಂಪ್ರದಾಯಕ್ಕೆ ಮರಳುತ್ತಿದ್ದಾರೆ. ಇದು ಕೂಡ ಇಷ್ಟಪಟ್ಟು ಆದ ಬದಲಾವಣೆಯಲ್ಲ!! ಖರ್ಚನ್ನ ಕಡಿಮೆ ಮಾಡಿಕೊಳ್ಳಲು ಬೇರೆ ದಾರಿಯಿಲ್ಲ.
ದುಡಿಯಲು ಶುರು ಮಾಡಿದ ತಕ್ಷಣ ಒಂದಷ್ಟು ಹಣಕಾಸು ನಿಯಮಗಳನ್ನ ಪಾಲಿಸಿದಿದ್ದರೆ ಯೂರೋಪಿನ ಮತ್ತು ಅಮೆರಿಕಾದ ಯುವ ಜನತೆ ಇಂದಿನ ದಿನವನ್ನ ಕಾಣುತ್ತಿರಲಿಲ್ಲ. ಮುಂದಿನ ಹತ್ತಾರು ವರ್ಷದಲ್ಲಿ ಗಳಿಸಬಹುದಾದ ಸಂಭಾವ್ಯ ಹಣವನ್ನ ಊಹಿಸಿಕೊಂಡು ಅದನ್ನ ಇಂದು ಖರ್ಚು ಮಾಡುವುದು ಜಾಗತಿಕ ಅರ್ಥ ವ್ಯವಸ್ಥೆ ಕುಸಿಯಲು ಅತಿ ದೊಡ್ಡ ಕಾರಣ. ಇಂದಿಗೆ ಅಮೆರಿಕಾ ದೇಶವೂ ಅತ್ಯಂತ ಜಟಿಲವಾದ ಆರ್ಥಿಕ ಸಂಕಷ್ಟದಲ್ಲಿದೆ. ಇದು ಕೇವಲ ಆರಂಭ ಮಾತ್ರ. ಮುಂಬರುವ ದಿನಗಳಲ್ಲಿ ಅಮೆರಿಕಾದ ಕುಸಿತವನ್ನ ತಡೆಯುವುದು ಅಸಾಧ್ಯ. ಯೂರೋಪಿನ ಅರ್ಥ ವ್ಯವಸ್ಥೆ ಕೂಡ ಅಮೆರಿಕಾ ದೇಶದ ನಕಲು. ಹೀಗಾಗಿ ಅವುಗಳ ಕುಸಿತವನ್ನ ಕೂಡ ತಡೆಯುವುದು ಅಸಾಧ್ಯ. ಒಂದಷ್ಟು ದಿನ ಕುಸಿತವನ್ನ ಮುಂದೂಡಬಹುದು ಹೊರತು ಕುಸಿತವನ್ನು ತಡೆಯಲು ಸಾಧ್ಯವಿಲ್ಲ.
ಭಾರತದಲ್ಲಿ ಯುವ ಜನರ ಸಂಖ್ಯೆ ಬಹಳವಿದೆ. ಈ ನಿಟ್ಟಿನಲ್ಲಿ ಯುವ ಜನತೆ ಪಾಲಿಸಬೇಕಾದ ಹಣಕಾಸು ನಿಯಮಗಳನ್ನ ವಿವರಿಸುವ ಪ್ರಯತ್ನ ಮಾಡುವೆ.
ಹೀಗೆ ಇನ್ನು ಹಲವಾರು ಸಣ್ಣಪುಟ್ಟ ಕಾರಣಗಳು ಜೊತೆಗೆ ಮನುಷ್ಯನ ಭಾವನೆಗಳು ತಾನೇ ಕಟ್ಟಿದ ನಂಬಿದ ವ್ಯವಸ್ಥೆಯನ್ನ ಕುಸಿಯುವಂತೆ ಮಾಡುತ್ತದೆ. ಇದರಿಂದ ಯೂರೋಪಿನ ಸಮಾಜದಲ್ಲಿ ಅನೇಕ ಬದಲಾವಣೆಗಾಳಿವೆ. ಕೆಲವು ಒಳ್ಳೆಯದು ಎನ್ನಿಸಬಹುದು ಕೆಲವು ಕೆಟ್ಟವು ಅನ್ನಿಸಬಹುದು. ಒಟ್ಟಿನಲ್ಲಿ ಆರ್ಥಿಕ ಕುಸಿತ ಅಲ್ಲಿನ ಸಮಾಜದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ ತಂದಿರುವುದಂತೂ ದಿಟ. ಅವೇನು ಎನ್ನುವುದನ್ನ ನೋಡೋಣ.
ಕೊನೆಮಾತು: ಅಸ್ಥಿರತೆಯೊಂದೇ ಇಂದಿನ ದಿನದಲ್ಲಿ ಸ್ಥಿರವಾಗಿರುವುದು ಎನ್ನುವ ಕಾಲಘಟ್ಟವನ್ನ ನಾವು ಪ್ರವೇಶಿದ್ದೇವೆ. ಜಾಣ್ಮೆ, ತಾಳ್ಮೆ, ನಿರಂತರ ಕಲಿಕೆ, ಹೊಂದಾವಣಿಕೆ ನಮ್ಮ ಮಂತ್ರವಾಗಿದ್ದರೆ ಉಳಿವು-ಗೆಲುವು ನಮ್ಮದಾಗಿರುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement