ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಹಿನ್ನೆಲೆ ಡಿಸೆಂಬರ್ 16ರಿಂದ ಚೆನ್ನೈನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಬಗ್ಗೆ ಆತಂಕ ನಿವಾರಣೆಯಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶೋಕತಪ್ತ ವಾತಾವರಣದಲ್ಲಿ ಟೆಸ್ಟ್ ಪಂದ್ಯ ನಡೆಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿತ್ತು.
ತಮಿಳುನಾಡಿನಲ್ಲಿರುವ ಭದ್ರತಾ ವ್ಯವಸ್ಥೆ, ಪೂರ್ವ ಸಿದ್ಥತೆಗಳ ಕುರಿತು ತಮಿಳುನಾಡು ಕ್ರಿಕೆಟ್ ಸಂಸ್ಥೆಯೊಂದಿಗೆ ಪರಿಶೀಲಿಸಿದ ನಂತರ ಬಿಸಿಸಿಐ ಮೇಲಿನ ತೀರ್ಮಾನಕ್ಕೆ ಬಂದಿದೆ.
Advertisement