ಸ್ವದೇಶ ಅಥವಾ ವಿದೇಶವಾಗಲಿ ಸರಣಿ ಗೆಲುವಿಗೆ ನಮ್ಮ ಆದ್ಯತೆ: ವಿರಾಟ್ ಕೊಹ್ಲಿ

ಸ್ವದೇಶ ಅಥವಾ ವಿದೇಶ ನೆಲವಾಗಲಿ ಸರಣಿ ಗೆಲುವಿಗೆ ನಮ್ಮ ಆದ್ಯತೆ ಎಂದು ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಬೆಂಗಳೂರು: ಸ್ವದೇಶ ಅಥವಾ ವಿದೇಶ ನೆಲವಾಗಲಿ ಸರಣಿ ಗೆಲುವಿಗೆ ನಮ್ಮ ಆದ್ಯತೆ ಎಂದು ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸ ಹಿನ್ನೆಲೆ ಬೆಂಗಳೂರಿನಲ್ಲಿ ಜಂಟಿ ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ನೆಲದಲ್ಲಿ ಆಡುವಾಗ ಬ್ಯಾಟ್ಸ್ ಮನಗಳು ತಾಳ್ಮೆ ಕಳೆದುಕೊಳ್ಳದೆ ಸಮಚಿತ್ತದಿಂದ ಆಡಬೇಕಿದೆ ಎಂದರು.

ಟೆಸ್ಟ್ ಕ್ರಿಕೆಟ್ ನಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತದೆ ಎನ್ನವ ನಂಬಿಕೆ ಇದೆ. ನಾವು ಟೆಸ್ಟ್ ಕ್ರಿಕೆಟ್ ಹೇಗೆ ಆಡುತ್ತೀವಿ ಎನ್ನುವುದನ್ನು ಮುಂದಿನ ಆರು ತಿಂಗಳಲ್ಲಿ ಸಾಬೀತುಪಡಿಸುತ್ತೇವೆ ಎಂದರು.

ಇದೇ ವೇಳೆ ಮಾತನಾಡಿದ ಅನಿಲ್ ಕುಂಬ್ಳೆ, ನಾಯಕ ವಿರಾಟ್ ಕೊಹ್ಲಿಯಲ್ಲಿರುವ ಉತ್ಸಾಹವನ್ನು ತುಂಬ ಇಷ್ಟಪಡುತ್ತೇನೆ. ನಾನೂ ಕೂಡ ಅಷ್ಟೇ ಉತ್ಸಾಹದಿಂದ ಇರಲು ಇಷ್ಟಪಡುತ್ತೇನೆ. ತಂಡದಲ್ಲಿರುವ ಕೆಲ ಆಟಗಾರರಿಗೆ ವೆಸ್ಟ್ ಇಂಡೀಸ್ ನೆಲದಲ್ಲಿ ಆಡಿದ ಅನುಭವವಿದ್ದು, ಮೊದಲ ಬಾರಿಗೆ ಆಡಲಿರುವ ಆಟಗಾರರಿಗೆ ನಮ್ಮ ಅನುಭವ ಸಹಕಾರಿಯಾಗಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com