ಬೆಂಗಳೂರು: ಮಹಿಳೆ ಮೇಲಿನ ದೈಹಿಕ ಹಲ್ಲೆ ಪ್ರಕರಣದಿಂದಾಗಿ ಟೀಂ ಇಂಡಿಯಾದ ಸ್ಪಿನ್ನರ್ ಅಮಿತ್ ಮಿಶ್ರಾಗೆ ಸಂಕಷ್ಟ ಎದುರಾಗಿದೆ.
ಅಮಿತ್ ಮಿಶ್ರಾ ವಿರುದ್ಧ ಕೆಳ ನ್ಯಾಯಾಲಯ ವಿಚಾರಣೆ ನಡೆಸಲು ತಡೆಯಾಜ್ಞೆ ನೀಡಿದ್ದ ರಾಜ್ಯ ಉಚ್ಛ ನ್ಯಾಯಾಲಯ ಇದೀಗ ಅದನ್ನು ತೆರವುಗೊಳಿಸಿದ್ದು ಕೆಳ ನ್ಯಾಯಾಲಯದಲ್ಲಿನ ವಿಚಾರಣೆಗೆ ಹಾಜರಾಗಬೇಕಿದೆ.
2015ರ ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ತರಬೇತಿ ಶಿಬಿರಕ್ಕಾಗಿ ಭಾರತ ತಂಡದ ಆಟಗಾರರು ನಗರದ ಹೊಟೇಲ್ ವೊಂದರಲ್ಲಿ ತಂಗಿದ್ದರು. ಈ ಸಮಯದಲ್ಲಿ ಅಮಿತ್ ಮಿಶ್ರಾ ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ಪರ ಅನೀಸ್ ಅಲಿ ಖಾನ್ ಬೆಂಗಳೂರಿನಲ್ಲಿ ದೂರು ನೀಡಿದ್ದರು.