ನವದೆಹಲಿ: ಪ್ರವಾಸಿ ಶ್ರೀಲಂಕಾದ ಆರಂಭಿಕ ಆಟಗಾರ ಸದೀರ ಸಮರವಿಕ್ರಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ನವದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದ 30ನೇ ಓವರ್ ನಲ್ಲಿ ಫಾರ್ವರ್ಡ್ ಶಾರ್ಟ್ ಲೆಗ್ ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ವೇಳೆ ಟೀಂ ಇಂಡಿಯಾ ಆಟಗಾರ ಮುರಳಿ ವಿಜಯ್ ಬಾರಿಸಿದ ಚೆಂಡು ಸಮರವಿಕ್ರಮ ಧರಿಸಿದ್ದ ಹೆಲ್ಮೆಟ್ ಗೆ ಬಡಿಯಿತು.
ಗಂಭೀರವಾಗಿ ಗಾಯಗೊಂಡ ಸಮರವಿಕ್ರಮ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು 24 ಗಂಟೆಗಳ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದು ವೈದ್ಯರ ಸೂಚನೆ ಮೇಲೆ ಸಮರ ವಿಕ್ರಮ ಆಟವಾಡುವ ಕುರಿತು ನಿರ್ಧರಿಸಲಾಗುತ್ತದೆ.