ಶ್ರೀಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಕರುಣರತ್ನೆ 2 ರನ್ ಗಳಿಸಿದ್ದಾಗ ಉಮೇಶ್ ಯಾದವ್ ಎಸೆತದಲ್ಲಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು. ಇನ್ನು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ತರಂಗ 64 ರನ್ ಗಳಿಸಿದ್ದಾಗ ರನ್ ಔಟ್ ಆದರು. ಬಳಿಕ ಬಂದ ಗುಣತಿಲಕ 16 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮೆಡಿಸ್ ಶೂನ್ಯಕ್ಕೆ ಔಟಾದರೇ, ಡಿಕ್ವೆಲ್ಲಾ 8 ರನ್ ಗೆ ನಿರ್ಗಮಿಸಿದರು. ಇನ್ನು ಮ್ಯಾಥ್ಯೂಸ್ ಅಜೇಯ 54 ಮತ್ತು ಪೆರೇರಾ 6 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ ಪರ ಮೊಹಮ್ಮದ್ ಶಮಿ 2 ವಿಕೆಟ್ ಮತ್ತು ಉಮೇಶ್ ಯಾದವ್, ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.