ವಾಂಖೆಡೆಯಲ್ಲಿ ರನ್ ಹೊಳೆ: ಬೌಲರ್‌ಗಳು ಏಕೆ ಬೇಕು? ಮಷಿನ್‌ಗಳನ್ನು ಬಳಸಿ: ಹರ್ಭಜನ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ರನ್ ಹೊಳೆ ಹರಿದಿದ್ದು...
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್
Updated on
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ರನ್ ಹೊಳೆ ಹರಿದಿದ್ದು ಇದಕ್ಕೆ ಮುಂಬೈ ತಂಡದ ಆಟಗಾರ ಹರ್ಭಜನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 40 ಓವರ್ ಗಳಲ್ಲಿ 453 ರನ್ ಸಿಡಿಸಿದ್ದರು. ವಾಂಖೆಡೆ ಮೈದಾನವನ್ನು ಬ್ಯಾಟಿಂಗ್ ಪಿಚ್ ಮಾಡಿರುವುದರಿಂದ ರನ್ ಹೊಳೆ ಹರಿದಿದ್ದು ಕ್ರೀಡಾಂಗಣದ ಪಿಚ್ ಕ್ಯೂರೇಟರ್ ರನ್ನು ಹರ್ಭಜನ್ ಸಿಂಗ್ ಟೀಕಿಸಿದ್ದಾರೆ. 
ತಮ್ಮ ಟ್ವೀಟರ್ ಖಾತೆಯಲ್ಲಿ ಹರ್ಭಜನ್ ಸಿಂಗ್ ಸದ್ಯದಲ್ಲೇ ಪಂದ್ಯಗಳಲ್ಲಿ ಬೌಲರ್ ಗಳ ಬದಲು ಬೌಲಿಂಗ್ ಯಂತ್ರಗಳನ್ನು ನೋಡಿದರೂ ಅಚ್ಚರಿಯಿಲ್ಲ ಎಂದು ಬರೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com