ಈ ಹಿಂದೆ ಕಾವೇರಿ ವಿಚಾರವಾಗಿ ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ನಡೆದಿದ್ದ ದಾಂಧಲೆ ನಡೆದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡಜ ತವರಿನ ಪಂದ್ಯಗಳನ್ನು ಪುಣೆಗೆ ರವಾನೆ ಮಾಡಲಾಗಿತ್ತು. ಹೀಗಾಗಿ ಪುಣೆಯ ಕ್ರಿಕೆಟ್ ಮೈದಾನವನ್ನು ಐಪಿಎಲ್ ಗೆ ಬಳಕೆ ಮಾಡಿಕೊಳ್ಳಲು ಬಿಸಿಸಿಐ ನಿರ್ಧರಿಸಿತ್ತು. ಆದರೀಗ ಬಿಸಿಸಿಐ ಮತ್ತು ಮಹಾರಾಷ್ಟ್ರ ಕ್ರಿಕೆಟ್ ಮಂಡಳಿ ನಿರ್ಧಾರಕ್ಕೆ ಬಾಂಬೇ ಹೈಕೋರ್ಟ್ ತಡೆ ನೀಡಿದ್ದು,ಮುಂದಿನ ಆದೇಶದವರೆಗೂ ಪುಣೆಯ ಮೈದಾನಕ್ಕೆ ಪವನ ಡ್ಯಾಂ ನ ನೀರನ್ನು ಬಳಕೆ ಮಾಡದಂತೆ ಆದೇಶ ನೀಡಿದೆ.