ವೃತ್ತಿ ಜೀವನದಲ್ಲಿ ಹಲವಾರು ರೀತಿಯ ಹೇಳಿಕೆಗಳು ಬರುತ್ತವೆ, ಆದರೆ ನಿಮ್ಮ ಗುರಿ ಸ್ಪಷ್ಟವಾಗಿದ್ದರೆ ಫಲಿತಾಂಶ ನಿಮ್ಮನ್ನು ಹಿಂಬಾಲಿಸುತ್ತವೆ ಎಂದು ತೆಂಡೂಲ್ಕರ್ ಕೊಹ್ಲಿಗೆ ಸಲಹೆ ನೀಡಿದ್ದಾರೆ. ಎಷ್ಟೇ ರನ್ ಗಳಿಸಿದರೂ ಬ್ಯಾಟ್ಸ್ ಮನ್ ಗೆ ತೃಪ್ತಿ ಇರಬಾರದು, ನನ್ನದೇ ಅನುಭವದಿಂದ ಸಲಹೆ ನೀಡುವುದಾದರೆ ಎಷ್ಟೇ ರನ್ ಗಳಿಸಿದರೂ ಅದು ಸಾಲದು, ವಿರಾಟ್ ಕೊಹ್ಲಿಯಲ್ಲೂ ಇದೇ ತುಡಿತವನ್ನು ಕಾಣಬಹುದಾಗಿದೆ, ಎಷ್ಟೇ ರನ್ ಗಳಿಸಿದರೂ ಅದು ಅವರಿಗೆ ಸಾಲುವುದಿಲ್ಲ. ನೀವು ತೃಪ್ತಿಪಟ್ಟಾಗಷ್ಟೇ ನಿಮ್ಮ ಪತನ ಪ್ರಾರಂಭವಾಗುತ್ತದೆ ಎಂದು ಸಚಿನ್ ಹೇಳಿದ್ದಾರೆ.