ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರ್ಗನ್, ಭಾರತ ತಂಡದ ಪ್ರದರ್ಶನವನ್ನು ಮನಃಪೂರ್ವಕ ಶ್ಲಾಘಿಸಿದರು. ಪ್ರಮುಖವಾಗಿ ಕುಲದೀಪ್ ಯಾದವ್ ಬೌಲಿಂಗ್ ದಾಳಿ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಪ್ರದರ್ಶನವನ್ನು ಮಾರ್ಗನ್ ಪ್ರಶಂಸಿದರು. ಕುಲದೀಪ್ ಯಾದವ್ ನಮ್ಮ ತಂಡದ ಬ್ಯಾಟಿಂಗ್ ಯೋಜನೆಗಳನ್ನು ಸಂಪೂರ್ಣ ವಿಫಲಗೊಳಿಸಿದರು. ನಾವು ಮುಂದಿನ ಪಂದ್ಯಗಳಲ್ಲಿ ಇನ್ನಷ್ಚು ಸಿದ್ಧತೆಗಳನ್ನು ಮಾಡಿಕೊಂಡು ಕಣಕ್ಕಿಳಿಯಬೇಕು ಎಂದು ಹೇಳಿದರು.