ಹೀಗಾಗಿ ಭಾರತ ಸೋಲುವುದು ಬಹುತೇಕ ಖಚಿತ ಎಂದು ಭಾವಿಸಲಾಗಿದ್ದು. ಆಗ ಕ್ರೀಸ್ ಗೆ ಬಂದ ಕಾರ್ತಿಕ್ ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟುವ ಮೂಲಕ ಮೈದಾನದಲ್ಲಿ ರೋಮಾಂಚನಕಾರಿ ಅನುಭವ ನೀಡಿದರು. ಬಳಿಕ ರುಬೆಲ್ ಹುಸೇನ್ ಎಸೆದ ಎರಡನೇ ಎಸೆತವನ್ನು ಬೌಂಡರಿ ತಳ್ಳಿದ ಕಾರ್ತಿಕ್, ಮೂರನೇ ಎಸೆತವನ್ನು ಮತ್ತೆ ಸಿಕ್ಸರ್ ಗೆ ಎತ್ತಿದರು. ಓವರ್ ನ ಅಂತಿಮ ಎಸೆತದಲ್ಲೂ ಬೌಂಡರಿ ಗಿಟ್ಟಿಸಿದ ಕಾರ್ತಿಕ್ ಭಾರತೀಯ ಅಭಿಮಾನಿಗಳಲ್ಲಿ ಗೆಲುವಿನ ಆಶಾಭಾವನೆ ಚಿಗುರಿಸಿದರು.