ಮಳೆಯಲ್ಲೂ ತನ್ನ ತೀರ್ಪು ಪ್ರಕಟಿಸಿ ಕ್ರೀಡಾ ಸ್ಫೂರ್ತಿ ಮೆರೆದ ಅಂಪೈರ್ ಅಲೀಂ ಕಾರ್ಯಕ್ಕೆ ಶ್ಲಾಘನೆ!

ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 219 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು...
ಅಲೀಂ ದಾರ್
ಅಲೀಂ ದಾರ್
Updated on
ಕೊಲಂಬೋ: ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 219 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. 
ಈ ಪಂದ್ಯದಲ್ಲಿ ಮೈದಾನದ ಅಂಪೈರ್ ಪಾಕಿಸ್ತಾನದ ಅಲೀಂ ದಾರ್ ತಮ್ಮ ಚಾಕಚಕ್ಯತೆ ತೋರಿ ನಿಖರವಾಗಿ ಔಟ್ ತೀರ್ಪು ನೀಡಿದ್ದರು. ಇದರಿಂದ ಇಂಗ್ಲೆಂಡ್ ತಂಡದ ಪುಂಕೆಟ್ ಡಿಆರ್ಎಸ್ ತೆಗೆದುಕೊಂಡರು. ಆಗ ಮೂರನೇ ಅಂಪೈರ್ ದೃಶ್ಯಗಳನ್ನು ಪರಿಶೀಲಿಸಿ ಔಟ್ ತೀರ್ಪು ಕೊಟ್ಟರು.
ಇನ್ನೇನು ಮಳೆ ಬರುವ ಸೂಚನೆ ಇದ್ದಿದ್ದರಿಂದ ಆಟಗಾರರು ಮೈದಾನ ತೊರೆದು ಪೆವಿಲಿಯನ್ ಸೇರಬೇಕಿತ್ತು. ಇನ್ನು ಆಟಗಾರರೆಲ್ಲಾ ಮೈದಾನ ತೊರೆದು ಪೆವಿಲಿಯನ್ ಸೇರಿದ್ದರು. ಅಲೀಂ ದಾರ್ ಮೂರನೇ ಅಂಪೈರ್ ತೀರ್ಪು ಬರುವವರೆಗೂ ಮೈದಾನದಲ್ಲೇ ಇದ್ದು ಮಳೆಯ ನಡುವೆ ತೀರ್ಪು ನೀಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com