ಮನೀಶ್ ಪಾಂಡೆ ಸ್ಲೆಡ್ಜಿಂಗ್ಗೆ ಸಿಕ್ಸರ್ ಮೂಲಕ ತಿರುಗೇಟು ಕೊಟ್ಟ ಪೂಜಾರ, ವಿಡಿಯೋ ವೈರಲ್!

ರಣಜಿ ಟ್ರೋಫಿಯ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ಸೆಮಿಫೈನಲ್ ಪಂದ್ಯ ರೋಚಕ ಘಟ್ಟಕ್ಕೆ ತಿರುಗಿದ್ದು ಪಂದ್ಯವನ್ನು ಗೆಲ್ಲಲೇಬೇಕು ಎಂಬ ಉದ್ದೇಶದೊಂದಿಗೆ ಉಭಯ ತಂಡದ ಆಟಗಾರರು...
ಮನೀಶ್ ಪಾಂಡೆ-ಚೇತೇಶ್ವರ ಪೂಜಾರ
ಮನೀಶ್ ಪಾಂಡೆ-ಚೇತೇಶ್ವರ ಪೂಜಾರ
ರಣಜಿ ಟ್ರೋಫಿಯ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ಸೆಮಿಫೈನಲ್ ಪಂದ್ಯ ರೋಚಕ ಘಟ್ಟಕ್ಕೆ ತಿರುಗಿದ್ದು ಪಂದ್ಯವನ್ನು ಗೆಲ್ಲಲೇಬೇಕು ಎಂಬ ಉದ್ದೇಶದೊಂದಿಗೆ ಉಭಯ ತಂಡದ ಆಟಗಾರರು ಸ್ಲೆಡ್ಜಿಂಗ್ ನಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಸೌರಾಷ್ಟ್ರ ತಂಡದ ಆಟಗಾರ ಚೇತೇಶ್ವರ ಪೂಜಾರರನ್ನು ಸ್ಲೆಡ್ಜಿಂಗ್ ಮಾಡಿದ್ದು ಇದಕ್ಕೆ ಪ್ರತಿಯಾಗಿ ಪೂಜಾರ ಸಿಕ್ಸರ್ ಬಾರಿಸುವ ಮೂಲಕ ತಿರುಗೇಟು ನೀಡಿದ್ದಾರೆ. 
ಶ್ರೇಯಸ್ ಗೋಪಾಲ್ ಬೌಲಿಂಗ್ ಗೂ ಮುನ್ನ ಮನೀಶ್ ಪಾಂಡೆ ಒಂದು ಕಳಪೆ ಹೊಡೆತ ಹೊಡೆದರೆ ಆತ(ಪೂಜಾರ) ಔಟಾಗುತ್ತಾನೆ ಎಂದು ಸ್ಲೆಡ್ಜಿಂಗ್ ಮಾಡಿದ್ದರು. ಇದೇ ವೇಳೆ ಪೂಜಾರ ಸಿಕ್ಸರ್ ಬಾರಿಸುವ ಮೂಲಕ ಪಾಂಡೆಗೆ ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com