ಕಳೆದೊಂದು ದಶಕದಲ್ಲಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ತಂಡಕ್ಕೆ ಕಬ್ಬಿಣದ ಕಡಲೆಯಾಗಿದ್ದ ಫೀಲ್ಡಿಂಗ್ ತಲೆನೋವು ಕ್ರಮೇಣ ಕಡಿಮೆಯಾಗಿದೆ. ಸೌರವ್ ಗಂಗೂಲಿ ನಾಯಕತ್ವ ವಹಿಸಿಕೊಂಡ ಬಳಿಕ ಮೊಹಮದ್ ಕೈಫ್, ಯುವರಾಜ್ ಸಿಂಗ್ ರಂತಹ ಅದ್ಭುತ ಫೀಲ್ಡರ್ ಗಳನ್ನು ತಂಡಕ್ಕೆ ಪರಿಚಯಿಸಿದ್ದರು. ಆ ಬಳಿಕ ನಾಯಕತ್ವ ವಹಿಸಿಕೊಂಡ ಧೋನಿ ಕೂಡ ಸುರೇಶ್ ರೈನಾ, ರವೀಂದ್ರ ಜಡೇಜಾ ಸೇರಿದಂತೆ ಸ್ವತಃ ತಾವೂ ಕೂಡ ಅದ್ಭುತ ವಿಕೆಟ್ ಕೀಪರ್ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು.