ಸೂರತ್: ನಾಯಕ ಸೂರ್ಯ ಕುಮಾರ್ ಯಾದವ್ (53 ಎಸೆತಗಳಲ್ಲಿ 94) ಇವರ ಭರ್ಜರಿ ಆಟದ ನೆರವಿನಿಂದ ಮುಂಬೈ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಏಳು ವಿಕೆಟ್ ಗಳಿಂದ ಮಣಿಸಿತು.
ಮುಂಬೈ ತಂಡದ ಆರಂಭಿಕರಾದ ಪೃಥ್ವಿ ಶಾ (30) ಹಾಗೂ ಆದಿತ್ಯ ತಾರೆ (12) ತಂಡಕ್ಕೆ ಸಮಯೋಚಿತ ಆರಂಭ ನೀಡಲಿಲ್ಲ. ಆರಂಭದ ಐದು ಓವರ್ ಗಳಲ್ಲಿ ಎರಡು ವಿಕೆಟ್ ಪಡೆದಿದ್ದ ಕರ್ನಾಟಕ ಅಬ್ಬರಿಸಿತು. ಮೂರನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು.
Advertisement