ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸೈಯದ್ ಮುಷ್ತಾಕ್ ಅಲಿ ಟಿ-20 ಪಂದ್ಯಗಳಿಗೆ ಬೆಂಗಳೂರು ಆತಿಥ್ಯ

ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲಾಗಿದ್ದ ದೇಶಿ ಕ್ರಿಕೆಟ್ ಋುತುವಿಗೆ ಚಾಲನೆ ನೀಡಲು ಬಿಸಿಸಿಐ ಮುಂದಾಗಿದೆ. 

ಬೆಂಗಳೂರು: ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲಾಗಿದ್ದ ದೇಶಿ ಕ್ರಿಕೆಟ್ ಋುತುವಿಗೆ ಚಾಲನೆ ನೀಡಲು ಬಿಸಿಸಿಐ ಮುಂದಾಗಿದೆ. 

ಮುಂದಿನ ತಿಂಗಳು (ಜನವರಿ) 10 ರಿಂದ 31ರ ವರೆಗೆ, ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಎಲೀಟ್ ಎ ಗುಂಪಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿವೆ. 

ದೇಶದ ಆರು ಮೈದಾನದಲ್ಲಿ ಈ ಪಂದ್ಯಗಳು ನಡೆಯಲಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. 

ಎಲೀಟ್ ಎ ಗುಂಪಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿವೆ. ಎಲೀಟ್ ಬಿ ಗುಂಪಿನ ಪಂದ್ಯ ಕೋಲ್ಕತ್ತಾ, ಎಲೀಟ್ ಸಿ ಗುಂಪಿನ ಪಂದ್ಯ ವಡೋದರಾದಲ್ಲಿ, ಎಲೀಡ್ ಡಿ ಗುಂಪಿನ ಪಂದ್ಯಗಳಿಗೆ ಇಂದೋರ್ ಆತಿಥ್ಯ ನೀಡಲಿದೆ. ಉಳಿದಂತೆ ಎಲೀಟ್ ಇ ಗುಂಪಿನ ಪಂದ್ಯ ಮುಂಬೈನಲ್ಲಿ, ಚೆನ್ನೈನಲ್ಲಿ ಪ್ಲೇಟ್ ಗುಂಪಿನ ಪಂದ್ಯ ನಡೆಯಲಿದೆ. 

Related Stories

No stories found.

Advertisement

X
Kannada Prabha
www.kannadaprabha.com