ಮೈಸೂರು: ಬಾಳೆಹಣ್ಣಿನ ಮೇಲೆ 'ಈ ಸಲ ಕಪ್ ನಮ್ದೆ', ಆರ್‌ಸಿಬಿ ಅಭಿಮಾನಿಗಳಿಂದ ಟೆಂಪಲ್ ರನ್!

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯ 13 ನೇ ಆವೃತ್ತಿ ಸಮೀಪಿಸುತ್ತಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಭಿಮಾನಿಗಳು ತಮ್ಮ ತಂಡಕ್ಕೆ ದೇವರು ಆಶೀರ್ವದಿಸಲಿ ಎಂದು ಟೆಂಪಲ್ ರನ್ ಮಾಡುತ್ತಿದ್ದಾರೆ. 
ಆರ್ ಸಿಬಿ ತಂಡ
ಆರ್ ಸಿಬಿ ತಂಡ
Updated on

ಮೈಸೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯ 13 ನೇ ಆವೃತ್ತಿ ಸಮೀಪಿಸುತ್ತಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಭಿಮಾನಿಗಳು ತಮ್ಮ ತಂಡಕ್ಕೆ ದೇವರು ಆಶೀರ್ವದಿಸಲಿ ಎಂದು ಟೆಂಪಲ್ ರನ್ ಮಾಡುತ್ತಿದ್ದಾರೆ. 

ಇತ್ತೀಚೆಗೆ, ಆರ್‌ಸಿಬಿ ಅಭಿಮಾನಿಯೊಬ್ಬರು ಚಾಮರಾಜನಗರದ ಮಲೆ ಮಹಾದೇಶ್ವರ  ದೇವಾಲಯದ ರಥದ ಮೇಲೆ ‘ಈ ಸಲಾ ಕಪ್ ನಾಮ್ದೆ’ ಎಂದು ಬರೆದಿರುವ ಬಾಳೆಹಣ್ಣನ್ನು ಎಸೆದಿದ್ದಾರೆ(ಇದು ಈ ಪ್ರದೇಶದ ಧಾರ್ಮಿಕ ಆಚರಣೆಯಾಗಿದ್ದು, ಇದು ಪ್ರತಿಯೊಬ್ಬರ ಆಸೆಗಳನ್ನು ಈಡೇರಿಸುತ್ತದೆ ಎಂದು ನಂಬಲಾಗಿದೆ).

ಇದೇ ವೇಳೆ ಭಕ್ತರ ಗುಂಪೊಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿ ಆರ್ಸಿಬಿ ತಂಡದ ಮೇಲೆ ವಿಶೇಷ ಪೂಜೆ-ಹವನಗಳನ್ನು ನೆರವೇರಿಸಿದ್ದಾರೆ. ಇನ್ನು ತಂಡದ ಅಧಿಕೃತ ಧ್ವಜವನ್ನು ಹಿಡಿದ ಆರ್ ಬಿಸಿ ಅಭಿಮಾನಿಯೊಬ್ಬ ಈಡುಗಾಯಿ ಹೊಡೆದರು. 

“ನಾನು ಕೆಲಸಕ್ಕಾಗಿ ಅಥವಾ ಗೆಳತಿಗಾಗಿ ಪ್ರಾರ್ಥಿಸುತ್ತಿಲ್ಲ. ಆರ್‌ಸಿಬಿ ಈ ವರ್ಷ ಐಪಿಎಲ್ ಕಪ್ ಗೆಲ್ಲಬೇಕು ಅಂತ ನಾನು ಬಯಸುತ್ತೇನೆ, ತಂಡದ ಮೇಲೆ ದಯೆ ಇರಲಿ ಎಂದು ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಅಭಿಮಾನಿಗಳು ಬೇಡಿಕೊಂಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com