ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ವೇಳೆ ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ನಡೆದ ನಿರಂತರ ಮಾತಿನ ಚಕಮಕಿ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐದನೇ ದಿನದಾಟದ ಅಂತ್ಯದಲ್ಲಿ ಉಭಯ ದೇಶಗಳ ಆಟಗಾರರ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತ್ತು. ಇದರಿಂದಾಗಿ ವಿರಾಟ್ ಕೊಹ್ಲಿ ಪಡೆ ಸಹಜವಾಗಿಯೇ ಹೆಚ್ಚು ಪ್ರೇರಣೆಗೊಂಡು ದಿಗ್ವಿಜಯ ಸಾಧಿಸಿದೆ.
ಕಳೆದ ಬಾರಿ ಎಂಎಸ್ ಧೋನಿ ನಾಯಕತ್ವದಲ್ಲಿನ ಟೀಂ ಇಂಡಿಯಾ ಟೆಸ್ಟ್ ಗೆದ್ದಾಗ ನಾನು ಟೀಂ ಇಂಡಿಯಾದ ಭಾಗವಾಗಿದ್ದೆ. ಅದು ವಿಶೇಷವಾಗಿರುವಂತೆಯೇ, ಇಶಾಂತ್ ಶರ್ಮಾ ಅದ್ಬುತ ಪ್ರದರ್ಶನ ನೀಡುವ ಮೂಲಕ ನಾಲ್ಕನೇ ದಿನದಂದು ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
ಸಿರಾಜ್ ಅಂತಹ ಆಟಗಾರರು ಮೊದಲ ಬಾರಿಗೆ ಲಾರ್ಡ್ಸ್ ಮೈದಾನದಲ್ಲಿ ಅದ್ಬುತ ಪ್ರದರ್ಶನ ತೋರಿದ್ದಾರೆ. ಮೈದಾನದಲ್ಲಿ ನಡೆದ ಮಾತಿನ ಚಕಮಕಿ, ನಿಜಕ್ಕೂ ಪಂದ್ಯ ಗೆಲ್ಲಲು ಹೆಚ್ಚುವರಿ ಪ್ರೇರಣೆಯಾಯಿತು ಎಂದು ಅವರು ತಿಳಿಸಿದರು.
Advertisement