ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ಗಂಟು-ಮೂಟೆ ಕಟ್ಕೊಂಡು ಮನೆಗೆ ಹೋಗ್ತಿವಿ: ರವೀಂದ್ರ ಜಡೇಜಾ ಉತ್ತರ!

ಟೀಮ್ ಇಂಡಿಯಾ ಶುಕ್ರವಾರ ದೊಡ್ಡ ಅಂತರದಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. 2021ರ ಟಿ-20 ವಿಶ್ವಕಪ್ ನಲ್ಲಿ ಭಾರತದ ಸತತ 2ನೇ ಗೆಲುವು ಇದಾಗಿದೆ.

ದುಬೈ: ಟೀಮ್ ಇಂಡಿಯಾ ಶುಕ್ರವಾರ ದೊಡ್ಡ ಅಂತರದಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಸೆಮಿಫೈನಲ್ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. 2021ರ ಟಿ-20 ವಿಶ್ವಕಪ್ ನಲ್ಲಿ ಭಾರತದ ಸತತ 2ನೇ ಗೆಲುವು ಇದಾಗಿದೆ.

ಭಾರತದ ಪಾಲಿಗೆ ಈ ಬಾರಿಯ ಟ್ವೆಂಟಿ-ಟ್ವೆಂಟಿ ವರ್ಲ್ಡ್ ಕಪ್ ರೋಚಕತೆಯಿಂದ ಕೂಡಿದ್ದು, ಬ್ಲ್ಯೂ ಬಾಯ್ಸ್ ಸೆಮಿ ಫೈನಲ್ ಗೆ ಹೋಗ್ತಾರೋ ಇಲ್ಲವೋ ಅನ್ನೋದನ್ನು ನಾಳೆ ನಡೆಯಲಿರುವ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ಪಂದ್ಯದ ಮೇಲೆ ನಿರ್ಧಾರವಾಗಲಿದೆ.

ಇಂಥ ಸಂದರ್ಭದಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯ ಗೆದ್ದ ನಂತರ, ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಪ್ರೆಸ್ ಕಾನ್ಫರೆನ್ಸ್ ಹಾಲ್ ಗೆ ಬಂದರು. ಈ ವೇಳೆ ಪತ್ರಕರ್ತರ ಪ್ರಶ್ನೆಯೊಂದು ರವೀಂದ್ರ ಜಡೇಜಾ ಅವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತು.

"ಒಂದು ವೇಳೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋಲನ್ನು ಅನುಭವಿಸಿದರೆ, ಮುಂದಿನ ನಿಮ್ಮ ರಣನೀತಿ ಹೇಗಿರುತ್ತದೆ ಎಂದು ಪ್ರಶ್ನಿಸಲಾಯಿತು.

ಈ ವೇಳೆ ನೇರವಾಗಿ ಹಾಗೂ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ರವೀಂದ್ರ ಜಡೇಜಾ, " ಅಂಥ ಸಂದರ್ಭದಲ್ಲಿ ಗಂಟು-ಮೂಟೆ ಕಟ್ಟಿಕೊಂಡು ಮನೆಗೆ ಹೋಗುತ್ತೇವೆ, ಮುಂದೇನು ಮಾಡಲಿಕ್ಕೆ ಆಗುತ್ತದೆ?" ಎಂದು ನೀಡಿರುವ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Related Stories

No stories found.

Advertisement

X
Kannada Prabha
www.kannadaprabha.com