ಟಿ20 ವಿಶ್ವಕಪ್: ಎಂಎಸ್ ಧೋನಿ ಇಲ್ಲದ್ದಕ್ಕೆ ಫಿನಿಶರ್ ಭಾರ ನನ್ನ ಮೇಲಿದೆ- ಹಾರ್ದಿಕ್ ಪಾಂಡ್ಯ

ಟಿ20 ವಿಶ್ವಕಪ್ ಅಭಿಯಾನಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಒಂದು ದೊಡ್ಡ ವಿಚಾರವನ್ನು ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಾಯ್ಬಿಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ದುಬೈ: ಟಿ20 ವಿಶ್ವಕಪ್ ಅಭಿಯಾನಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಒಂದು ದೊಡ್ಡ ವಿಚಾರವನ್ನು ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಾಯ್ಬಿಟ್ಟಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಮೊದಲ ಬಾರಿ ಟಿ-20 ವಿಶ್ವಕಪ್ ಆಡಬೇಕಿದೆ. ಪ್ರಮುಖ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಗ್ರೇಟ್ ಫಿನಿಶರ್ ಆಗಿ ಹೊರಹೊಮ್ಮುತ್ತಿದ್ದರು. ತನಗೆ ಸಹೋದರ ಹಾಗೂ ಜೀವನದ ತರಬೇತುದಾರನಾಗಿರುವ ಧೋನಿ ಅನುಪಸ್ಥಿತಿಯಲ್ಲಿ ಫಿನಿಶರ್ ಎಂಬ ಭಾರವನ್ನು ತಾನು ಹೊರಬೇಕಾಗಿದೆ ಅಂತಾ ಹೇಳಿದ್ದಾರೆ.

ಇ ಎಸ್ ಪಿ ಎನ್ ಕ್ರಿಕ್ ಇನ್ಫೋಗೆ ನೀಡಿರುವ ಸಂದರ್ಶನದಲ್ಲಿ ಹಾರ್ದಿಕ್ ಪಾಂಡ್ಯ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೀವನದುದ್ದಕ್ಕೂ ತಾವು ಅನುಭವಿಸಿದ ಸವಾಲುಗಳು ಹಾಗೂ ಮಹೇಂದ್ರ ಸಿಂಗ್ ಧೋನಿಯೊಂದಿಗಿನ ಅಸಾಧಾರಣ ಬಾಂಧವ್ಯದ ಬಗ್ಗೆ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com