15 ಕೋಟಿ ರೂ. ವಂಚನೆ: ಮಾಜಿ ಬಿಸಿನೆಸ್ ಪಾರ್ಟ್‌ನರ್ ಗಳ ವಿರುದ್ಧ ಕೇಸ್ ದಾಖಲಿಸಿದ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮಾಜಿ ಮಾಜಿ ಬಿಸಿನೆಸ್ ಪಾರ್ಟ್‌ನರ್ ಗಳು ತಮಗೆ 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಕೇಸ್ ದಾಖಲಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮಾಜಿ ಮಾಜಿ ಬಿಸಿನೆಸ್ ಪಾರ್ಟ್‌ನರ್ ಗಳು ತಮಗೆ 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಕೇಸ್ ದಾಖಲಿಸಿದ್ದಾರೆ.

ತಮ್ಮ ಮಾಜಿ ಬಿಸಿನೆಸ್ ಪಾರ್ಟ್‌ನರ್ ಗಳಾದ ಮಿಹಿರ್ ದಿವಾಕರ್ ಮತ್ತು ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಸೌಮ್ಯ ವಿಶ್ವಾಸ್ ವಿರುದ್ಧ ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಮಿಹಿರ್ ದಿವಾಕರ್ ಅವರು 2017ರಲ್ಲಿ ಧೋನಿಯೊಂದಿಗೆ ವಿಶ್ವದಾದ್ಯಂತ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಒಪ್ಪಂದ ಮಾಡಿಕೊಂಡಿದ್ದರು. ನನ್ನ ಹೆಸರಿನಲ್ಲಿ ಹಲವಾರು ಕಡೆ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಿದ ನಂತರ ಕಂಪನಿಯು ಲಾಭದ ಪಾಲು ನೀಡುವ ಒಪ್ಪಂದವನ್ನು ಅನುಸರಿಸಿಲ್ಲ. ಇದರಿಂದಾಗಿ ತಮಗೆ 15 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಧೋನಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಧೋನಿ ಪರ ವಕೀಲ ದಯಾನಂದ್ ಸಿಂಗ್ ಪ್ರಕಾರ, ಧೋನಿ ಮತ್ತು ಕಂಪನಿಯ ನಡುವೆ 2017 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

"ಒಪ್ಪಂದದಲ್ಲಿ ಅರ್ಕಾ ಸ್ಪೋರ್ಟ್ಸ್ ಫ್ರ್ಯಾಂಚೈಸ್ ಶುಲ್ಕ ಪಾವತಿಸಲು ಮತ್ತು ಲಾಭದ ಹಂಚಿಕೆಯನ್ನು ನಿಗದಿಪಡಿಸಿದೆ. ಆದರೆ ಕಂಪನಿಯು ಹಾಗೆ ಮಾಡಲಿಲ್ಲ. ಈ ಸಂಬಂಧ ಧೋನಿ ಅವರು ಕಂಪನಿಗೆ ಹಲವು ಬಾರಿ ನೋಟಿಸ್ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಲಾಭದಲ್ಲಿ ಯಾವುದೇ ಪಾಲು ನೀಡಿಲ್ಲ ಎಂದು ವಕೀಲರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com