
ಶುಭಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ದಿ ಓವಲ್ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತು. ಮೊಹಮ್ಮದ್ ಸಿರಾಜ್ ಒಂಬತ್ತು ವಿಕೆಟ್ಗಳನ್ನು ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ಆರು ರನ್ಗಳಿಂದ ಪಂದ್ಯವನ್ನು ಗೆದ್ದು ಐದು ಪಂದ್ಯಗಳ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು. ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಗಾಯಗಳಿಂದ ಬಳಲುತ್ತಿದ್ದರು.
ರಿಷಭ್ ಪಂತ್ ಅವರ ಕಾಲಿನ ಬೆರಳು ಮುರಿದು ಐದನೇ ಟೆಸ್ಟ್ನಿಂದ ಹೊರಗುಳಿದಿದ್ದರು. ಅವರನ್ನು ಹೊರತುಪಡಿಸಿ, ನಿತೀಶ್ ಕುಮಾರ್ ರೆಡ್ಡಿ, ಅರ್ಶದೀಪ್ ಸಿಂಗ್ ಮತ್ತು ಆಕಾಶ್ ದೀಪ್ ಕೂಡ ಗಾಯಗೊಂಡಿದ್ದರು.
ಆದಾಗ್ಯೂ, ಸರಣಿಯ ಸಮಯದಲ್ಲಿ ಬೆಳಕಿಗೆ ಬರದ ಒಂದು ಗಾಯವೆಂದರೆ ಬ್ಯಾಟ್ಸ್ಮನ್ ಕರುಣ್ ನಾಯರ್. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಐದನೇ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕರುಣ್ ಅವರ ಬೆರಳಿಗೆ ಗಾಯವಾಗಿತ್ತು.
ಸೆಂಟ್ರಲ್ ಝೋನ್ ಪರವಾಗಿ ಕರುಣ್ ನಾಯರ್ ಇದೀಗ ಮುಂಬರುವ ದುಲೀಪ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ. ದುಲೀಪ್ ಟ್ರೋಫಿ 2025ರ ಮೊದಲ ಪಂದ್ಯ ಆಗಸ್ಟ್ 28 ರಿಂದ ಉತ್ತರ ವಲಯ ಮತ್ತು ಪೂರ್ವ ವಲಯದ ನಡುವೆ ನಡೆಯಲಿದೆ.
ಎಂಟು ವರ್ಷಗಳ ವಿರಾಮದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿರುವ ನಾಯರ್, ಇಂಗ್ಲೆಂಡ್ ವಿರುದ್ಧ ಸರಾಸರಿ ಪ್ರದರ್ಶನ ನೀಡಿದರು. ನಾಲ್ಕು ಪಂದ್ಯಗಳಲ್ಲಿ, ಅವರು ಒಂದು ಅರ್ಧಶತಕ ಸೇರಿದಂತೆ ಕೇವಲ 205 ರನ್ ಗಳಿಸಿದರು.
ಜುಲೈ ಆರಂಭದಲ್ಲಿ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ನೀಡಿದ ನಂತರ, ಮುಂಬರುವ ದೇಶೀಯ ಋತುವಿಗಾಗಿ ಮೂರು ವರ್ಷಗಳ ವಿರಾಮದ ನಂತರ ನಾಯರ್ ಕರ್ನಾಟಕಕ್ಕೆ ಮರಳಿದರು.
2024-25 ಆವೃತ್ತಿಯಲ್ಲಿ ವಿದರ್ಭ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಕರುಣ್ ನಾಯರ್ ಪ್ರಮುಖ ಪಾತ್ರ ವಹಿಸಿದರು. 53 ಸರಾಸರಿಯಲ್ಲಿ 863 ರನ್ ಗಳಿಸಿದರು ಮತ್ತು ಕೇರಳ ವಿರುದ್ಧದ ಫೈನಲ್ನಲ್ಲಿ ಶತಕ ಗಳಿಸಿದರು.
'ಕಳೆದ ಎರಡು ಋತುಗಳಲ್ಲಿ ಅವರು ನಮ್ಮ ತಂಡದ ಪ್ರಮುಖ ಭಾಗವಾಗಿರುವುದರಿಂದ ಅವರು ತಂಡದಿಂದ ಹೊರಹೋಗುವುದನ್ನು ನೋಡುವುದು ಕಷ್ಟ. ಆದರೆ, ಅದು ಅವರ ನಿರ್ಧಾರ ಮತ್ತು ನಾವು ಅದನ್ನು ಗೌರವಿಸುತ್ತೇವೆ ಮತ್ತು NOC ನೀಡಲಾಗಿದೆ. ಮುಂದಿನ ಋತುಗಳಲ್ಲಿ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಆಶಿಸುತ್ತೇವೆ' ಎಂದು VCA ಅಧಿಕಾರಿಯೊಬ್ಬರು PTI ಗೆ ತಿಳಿಸಿದರು.
ವಿದರ್ಭದೊಂದಿಗಿನ ಯಶಸ್ವಿ ಪ್ರಯಾಣವು ಎಂಟು ವರ್ಷಗಳ ನಂತರ ನಾಯರ್ ಭಾರತೀಯ ಟೆಸ್ಟ್ ತಂಡಕ್ಕೆ ಮರಳಲು ಸಹಾಯ ಮಾಡಿತು.
Advertisement