'ಮೊಹಮ್ಮದ್ ಶಮಿ ಎಲ್ಲಿದ್ದಾರೆ?': 'ಉತ್ತಮ ಬೌಲರ್‌ಗಳನ್ನು ಬದಿಗಿಟ್ಟಿದ್ದಕ್ಕಾಗಿ' ಗೌತಮ್ ಗಂಭೀರ್, ಅಜಿತ್ ಅಗರ್ಕರ್ ವಿರುದ್ಧ ಕಿಡಿ

45 ವರ್ಷದ ಆಟಗಾರ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಸಾಕಷ್ಟು ಪಂದ್ಯ ಗೆಲ್ಲುವ ಆಟಗಾರರು ಭಾರತಕ್ಕೆ ಇಲ್ಲ ಮತ್ತು ಇದು ಒಂದು ದೊಡ್ಡ ಕಳವಳಕಾರಿ ವಿಷಯ ಎಂದಿದ್ದಾರೆ.
Mohammed Shami
ಮೊಹಮ್ಮದ್ ಶಮಿ
Updated on

ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ವಿರೋಚಿತ ಪ್ರದರ್ಶನದ ಹೊರತಾಗಿಯೂ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ನಿರ್ಲಕ್ಷ್ಯಿಸಿದ್ದಕ್ಕಾಗಿ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭಾರತ ತಂಡದ ಆಡಳಿತ ಮಂಡಳಿ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದಲ್ಲಿ ಭಾರತ ಪರ ಕೊನೆಯ ಬಾರಿಗೆ ಆಡಿದ್ದ ಶಮಿ, ಐದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರ ನಾಲ್ಕು ವಿಕೆಟ್‌ ಗೊಂಚಲು ಸೇರಿದೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹರ್ಭಜನ್, ಶಮಿ ಅವರನ್ನು ಕೈಬಿಟ್ಟಿದ್ದಕ್ಕಾಗಿ ತಂಡದ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು, ಆಡಳಿತ ಮಂಡಳಿಯು ಉತ್ತಮ ಬೌಲರ್‌ಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿದೆ ಎಂದು ಹೇಳಿದರು.

'ಶಮಿ ಎಲ್ಲಿದ್ದಾರೆ? ಶಮಿ ಏಕೆ ಆಡುತ್ತಿಲ್ಲ ಎಂಬುದು ನನಗೆ ತಿಳಿದಿಲ್ಲ. ನನಗೆ ಅರ್ಥವಾಯಿತು, ನಿಮ್ಮಲ್ಲಿ ಪ್ರಸಿದ್ಧ್ ಕೃಷ್ಣ ಇದ್ದಾರೆ. ಅವರು ಉತ್ತಮ ಬೌಲರ್, ಆದರೆ ಅವರು ಇನ್ನೂ ಕಲಿಯುವುದು ಬಹಳಷ್ಟಿದೆ. ನಿಮ್ಮಲ್ಲಿ ಉತ್ತಮ ಬೌಲರ್‌ಗಳಿದ್ದರೂ, ನೀವು ಅವರನ್ನು ನಿಧಾನವಾಗಿ ಬದಿಗಿಟ್ಟಿದ್ದೀರಿ. ಬುಮ್ರಾ ಇದ್ದಾಗ ಇದು ವಿಭಿನ್ನ ಬೌಲಿಂಗ್ ದಾಳಿ ಮತ್ತು ಬುಮ್ರಾ ಇಲ್ಲದಿದ್ದಾಗಲೂ, ಇದು ಸಂಪೂರ್ಣ ವಿಭಿನ್ನ ದಾಳಿ. ಜಸ್ಪ್ರೀತ್ ಬುಮ್ರಾ ಇಲ್ಲದೆ ಪಂದ್ಯಗಳನ್ನು ಗೆಲ್ಲುವ ಕಲೆಯನ್ನು ನಾವು ಕಲಿಯಬೇಕು' ಎಂದು ಹರ್ಭಜನ್ ಹೇಳಿದರು.

45 ವರ್ಷದ ಆಟಗಾರ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಸಾಕಷ್ಟು ಪಂದ್ಯ ಗೆಲ್ಲುವ ಆಟಗಾರರು ಭಾರತಕ್ಕೆ ಇಲ್ಲ ಮತ್ತು ಇದು ಒಂದು ದೊಡ್ಡ ಕಳವಳಕಾರಿ ವಿಷಯ ಎಂದಿದ್ದಾರೆ.

Mohammed Shami
'ಟೆಸ್ಟ್ ಕ್ರಿಕೆಟ್ ಸಂಪೂರ್ಣ ನಾಶವಾಗಿದೆ, ಶಾಂತಿ ಸಿಗಲಿ': ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕಿಡಿ

'ಇಂಗ್ಲೆಂಡ್‌ನಲ್ಲಿ, ಬುಮ್ರಾ ಇಲ್ಲದೆ, ಮೊಹಮ್ಮದ್ ಸಿರಾಜ್ ನಂಬಲಾಗದ, ಅದ್ಭುತ ಪ್ರದರ್ಶನ ನೀಡಿದರು. ಬುಮ್ರಾ ಆಡದ ಎಲ್ಲ ಟೆಸ್ಟ್‌ಗಳನ್ನು ಭಾರತ ಗೆದ್ದಿತು. ಆದರೆ, ಸಣ್ಣ ಸ್ವರೂಪಗಳಲ್ಲಿ, ವೇಗದ ಬೌಲಿಂಗ್ ಆಗಿರಲಿ ಅಥವಾ ಸ್ಪಿನ್ ಆಗಿರಲಿ, ನಿಮ್ಮ ಪಂದ್ಯಗಳನ್ನು ಗೆಲ್ಲಿಸಬಲ್ಲ ಆಟಗಾರರನ್ನು ನಾವು ಹುಡುಕಬೇಕಾಗಿದೆ. ಬಂದು ವಿಕೆಟ್ ತೆಗೆದುಕೊಳ್ಳಬಲ್ಲ ಸ್ಪಿನ್ನರ್‌ಗಳನ್ನು ಹುಡುಕಿ. ಕುಲ್‌ದೀಪ್ ಇದ್ದಾರೆ, ಆದರೆ ಉಳಿದವರ ಬಗ್ಗೆ ಏನು?' ಎಂದು ಅವರು ಪ್ರಶ್ನಿಸಿದರು.

'ODI ಪಂದ್ಯಗಳಲ್ಲಿಯೂ ವರುಣ್ ಚಕ್ರವರ್ತಿಯನ್ನು ಮರಳಿ ಕರೆತನ್ನಿ, ನೀವು ಈಗಾಗಲೇ T20I ಗಳಲ್ಲಿ ಅವರನ್ನು ಹೊಂದಿದ್ದೀರಿ, ಆದ್ದರಿಂದ ODI ಗಳಲ್ಲಿಯೂ ಅವರನ್ನು ಪ್ರಯತ್ನಿಸಿ' ಎಂದು ಅವರು ಹೇಳಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 359 ರನ್‌ಗಳ ಗುರಿಯನ್ನು ನೀಡಿದ್ದರೂ, ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾದ ನಂತರ ಅವರು ಈ ಹೇಳಿಕೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com