IPL 2025: ಐಪಿಎಲ್ ವೇಳೆ ಬಿಳಿ ಜೆರ್ಸಿ ತೊಟ್ಟ ಫ್ಯಾನ್ಸ್; ಕೊಹ್ಲಿ ಮೇಲೆ RCB ಅಭಿಮಾನಿಗಳ ಪ್ರೀತಿ ವಿಶೇಷ ಎಂದ ಸಂಜಯ್ ಮಂಜ್ರೇಕರ್

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ವಿರಾಟ್ ಕೊಹ್ಲಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ಆರ್‌ಸಿಬಿ ಅಭಿಮಾನಿಗಳು ಬಿಳಿಯ ಜೆರ್ಸಿ ತೊಟ್ಟು ಕ್ರೀಡಾಂಗಣಕ್ಕೆ ಬಂದಿದ್ದರು.
Sanjay Manjrekar
ಸಂಜಯ್ ಮಂಜ್ರೇಕರ್
Updated on

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳು ನೀಡಿದ ಹೃದಯಸ್ಪರ್ಶಿ ಗೌರವವನ್ನು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಶ್ಲಾಘಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ವಿರಾಟ್ ಕೊಹ್ಲಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ಆರ್‌ಸಿಬಿ ಅಭಿಮಾನಿಗಳು ಬಿಳಿಯ ಜೆರ್ಸಿ ತೊಟ್ಟು ಕ್ರೀಡಾಂಗಣಕ್ಕೆ ಬಂದಿದ್ದರು.

ಶನಿವಾರ ಸಂಜೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಬಿಳಿ ಬಣ್ಣದ ಜೆರ್ಸಿಯಿಂದ ತುಂಬಿ ತುಳುಕಿತ್ತು. ಅಭಿಮಾನಿಗಳು ದಂತಕಥೆ ಕೊಹ್ಲಿ ಅವರ ವೃತ್ತಿಜೀವನಕ್ಕೆ ಗೌರವ ಸಲ್ಲಿಸಲು ಐಕಾನಿಕ್ ನಂಬರ್ 18 ಅನ್ನು ಒಳಗೊಂಡಿರುವ ಬಿಳಿ ಜೆರ್ಸಿಗಳನ್ನು ಧರಿಸಿದರು.

ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ, ವಿರಾಟ್ ಅವರಿಗೆ ಗೌರವ ಸೂಚಿಸುವ ಸಲುವಾಗಿ RCB vs KKR ಪಂದ್ಯಕ್ಕೆ ಬಿಳಿ ಜೆರ್ಸಿಯನ್ನು ತೊಟ್ಟು ಕ್ರೀಡಾಂಗಣಕ್ಕೆ ಬರಬೇಕು ಎನ್ನುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು. ಸಣ್ಣ ಕಲ್ಪನೆಯಾಗಿ ಪ್ರಾರಂಭವಾದದ್ದು, ಅಭಿಮಾನಿಗಳು ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನೀಡಿದ ಕೊಡುಗೆಯನ್ನು ಆಚರಿಸಲು ಒಗ್ಗೂಡಿದಾಗ, ಅದು ಪ್ರಬಲ ಚಳುವಳಿಯಾಗಿ ಬದಲಾಯಿತು.

'ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಹೊಂದಿರುವ ಪ್ರೀತಿ ವಿಶೇಷವಾದದ್ದು. ಇದು ಐಪಿಎಲ್ ರಾತ್ರಿ ಪಂದ್ಯವಾಗಿತ್ತು ಮತ್ತು ಭಾರತೀಯ ಕ್ರಿಕೆಟ್ ಇತಿಹಾಸದ ಒಂದು ಕ್ಷಣವನ್ನು ಸ್ಮರಿಸಲು ಅಭಿಮಾನಿಗಳು ಬಿಳಿಯ ಉಡುಪಿನಲ್ಲಿ ಬಂದರು. ಅದೊಂದು ಸುಂದರವಾದ ಸನ್ನೆ. ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ಅನ್ನು ವೀಕ್ಷಿಸಬಹುದಾದ ಮತ್ತು ಹೆಚ್ಚು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಆಟಗಾರ. ಯಾವುದೇ ಆಟಗಾರನು ಆಟಕ್ಕಿಂತ ದೊಡ್ಡವನಲ್ಲ ಎಂದು ನಾವು ಆಗಾಗ್ಗೆ ಹೇಳುತ್ತೇವೆ. ಆದರೆ, ಟೆಸ್ಟ್ ಕ್ರಿಕೆಟ್ ಅಭಿಮಾನಿಗಳನ್ನು ತೊಡಗಿಸಿಕೊಳ್ಳಲು ಹೆಣಗಾಡುತ್ತಿದ್ದ ಸಮಯದಲ್ಲಿ, ವಿರಾಟ್ ಅದಕ್ಕೆ ತಕ್ಕ ವೇದಿಕೆ ನಿರ್ಮಿಸಿದರು' ಎಂದು ಮಂಜ್ರೇಕರ್ ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದರು.

Sanjay Manjrekar
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಿವೃತ್ತಿಗೆ ಭಯಪಡುವ ಅಗತ್ಯವಿಲ್ಲ: ಸಂಜಯ್ ಮಂಜ್ರೇಕರ್

'ಅವರು ಇನ್ನೂ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್ ಅನ್ನು ಜೀವಂತವಾಗಿಡುವ ಬಯಕೆ ಅವರಲ್ಲಿತ್ತು. ಒಬ್ಬ ನಾಯಕನಾಗಿ, ತಂಡವು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ಅಥವಾ ಪರಿಸ್ಥಿತಿ ಹದಗೆಟ್ಟಾಗಲೂ ಸಹ, ತೀವ್ರತೆಯನ್ನು ಇಷ್ಟು ಹೆಚ್ಚಾಗಿ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಭಾರತೀಯ ಟೆಸ್ಟ್ ನಾಯಕನನ್ನು ನಾನು ಎಂದಿಗೂ ನೋಡಿಲ್ಲ. ಅದು ಸ್ವತಃ ಒಂದು ಪರಂಪರೆಯಾಗಿದೆ' ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರ ಐಪಿಎಲ್ ಸ್ಥಗಿತಗೊಂಡ ನಂತರ ಮೇ 17ರಂದು ಪುನರಾರಂಭಗೊಂಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತು. ಆದರೂ, ಅಭಿಮಾನಿಗಳು ಬಿಳಿ ಜೆರ್ಸಿ ತೊಟ್ಟು ಬಂದಿದ್ದು, ಕಂಡುಬಂತು.

ಮಳೆಯಿಂದಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು ಮತ್ತು ಈ ಮೂಲಕ ಆರ್‌ಸಿಬಿ 12 ಪಂದ್ಯಗಳಿಂದ 17 ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್‌ ತಲುಪಲು ಇನ್ನೊಂದು ಹೆಜ್ಜೆ ದೂರವಿದೆ. ಆದರೆ, 13 ಪಂದ್ಯಗಳಿಂದ 12 ಅಂಕಗಳೊಂದಿಗೆ ಕೆಕೆಆರ್ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com