

ಮುಂಬೈ: ಹಾಲಿ ರಣಜಿ ಟೂರ್ನಿಯಲ್ಲಿ ಹರ್ಯಾಣದ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಹೊಸ ಇತಿಹಾಸ ನಿರ್ಮಿಸಿದ್ದು, ಒಂದೂ ರನ್ ನೀಡದೇ 5 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಹೌದು.. ಹಾಲಿ ರಣಜಿ ಟೂರ್ನಿಯಲ್ಲಿ 22 ವರ್ಷದ ಉದಯೋನ್ಮುಖ ಆಟಗಾರ ಅಮಿತ್ ಶುಕ್ಲಾ ಹೊಸ ಇತಿಹಾಸ ನಿರ್ಮಿಸಿದ್ದು, ಅದು ಸಹ 4 ಓವರ್ಗಳಲ್ಲೇ 5 ವಿಕೆಟ್ ಕಬಳಿಸುವ ಮೂಲಕ ಈ ಅತ್ಯಪರೂಪದ ದಾಖಲೆ ನಿರ್ಮಿಸಿದ್ದಾರೆ.
ಇನ್ನೂ ಅಚ್ಚರಿ ಎಂದರೆ ಅಮಿತ್ ಶುಕ್ಲಾ ಎಸೆದಿದ್ದ ಈ ನಾಲ್ಕು ಓವರ್ಗಳು ಕೂಡ ಮೇಡನ್ ಆಗಿತ್ತು. ಅಂದರೆ ಅಮಿತ್ ಶುಕ್ಲಾ ಆ ನಾಲ್ಕು ಓವರ್ ನಲ್ಲಿ ಯಾವುದೇ ರನ್ ನೀಡದೇ 5 ವಿಕೆಟ್ಗಳನ್ನು ಕಬಳಿಸಿದ್ದಾರೆ.
ರೋಹ್ಟಕ್ನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಸರ್ವೀಸಸ್ ಮತ್ತು ಹರ್ಯಾಣ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ವೀಸಸ್ ತಂಡವು ಕೇವಲ 211 ರನ್ಗಳಿಸಿ ಆಲೌಟ್ ಆಗಿತ್ತು.
ಇದಕ್ಕೆ ಉತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ಹರ್ಯಾಣ ತಂಡಕ್ಕೆ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಮರ್ಮಾಘಾತ ನೀಡಿದರು. 4 ಓವರ್ ನಲ್ಲಿ ಒಂದೂ ರನ್ ನೀಡದೆ 5 ವಿಕೆಟ್ ಕಬಳಿಸಿದ್ದಾರೆ.
ಒಂದಾದರ ಮೇಲೊಂದು ವಿಕೆಟ್
ಈ ಪಂದ್ಯದಲ್ಲಿ 2ನೇ ಓವರ್ನಲ್ಲಿ ದಾಳಿಗಿಳಿದ ಅಮಿತ್ ಶುಕ್ಲಾ ತಮ್ಮ ದ್ವಿತೀಯ ಎಸೆತದಲ್ಲೇ ಮೊದಲ ವಿಕೆಟ್ ಪಡೆದರು. ಈ ಓವರ್ನಲ್ಲಿ ಅವರು ಯಾವುದೇ ರನ್ ನೀಡಿರಲಿಲ್ಲ. ಇದಾದ ಬಳಿಕ 4ನೇ ಓವರ್ನ ಮೊದಲ ಎಸೆತದಲ್ಲೇ 2ನೇ ವಿಕೆಟ್ ಕಬಳಿಸಿದರು. ಈ ಓವರ್ನಲ್ಲೂ ಯಾವುದೇ ರನ್ ಕೊಟ್ಟಿರಲಿಲ್ಲ. ಆನಂತರ 6ನೇ ಓವರ್ನ 5ನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು.
ಈ ಓವರ್ ಕೂಡ ಮೇಡನ್ ಆಗಿತ್ತು, ಇನ್ನು 8ನೇ ಓವರ್ನ ಮೊದಲ ಎಸೆತದಲ್ಲಿ ಧೀರು ಸಿಂಗ್ ವಿಕೆಟ್ ಪಡೆದ ಅಮಿತ್ ಶುಕ್ಲಾ, ಮೂರನೇ ಎಸೆತದಲ್ಲಿ ನಿಖಿಲ್ ಕಶ್ಯಪ್ ವಿಕೆಟ್ ಕಬಳಿಸಿದರು. ಈ ಮೂಲಕ ಒಂದೇ ಒಂದು ರನ್ ನೀಡದೇ ಐದು ವಿಕೆಟ್ಗಳ ಸಾಧನೆ ಮಾಡಿದರು.
8 ವಿಕೆಟ್ ಕಬಳಿಸಿದ ಅಮಿತ್ ಶುಕ್ಲಾ
ಯಾವುದೇ ರನ್ ನೀಡದೇ ಮೊದಲ 5 ವಿಕೆಟ್ ಕಬಳಿಸಿದ್ದ ಅಮಿತ್ ಶುಕ್ಲಾ ಆ ಬಳಿಕ ಕೂಡ ತನ್ನ ಸ್ಪಿನ್ ಮೋಡಿ ಮುಂದುವರೆಸಿ ಮತ್ತೆ 3 ವಿಕೆಟ್ ಪಡೆದರು. ಈ ಮೂಲಕ 20 ಓವರ್ಗಳನ್ನು ಎಸೆದ ಅವರು 8 ಮೇಡನ್ ಜೊತೆ ಕೇವಲ 27 ರನ್ ನೀಡಿ 8 ವಿಕೆಟ್ ಕಬಳಿಸಿದರು.
ಅಮಿತ್ ಶುಕ್ಲಾ ಅವರ ಈ ಭರ್ಜರಿ ಬೌಲಿಂಗ್ನಿಂದಾಗಿ ಹರ್ಯಾಣ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 111 ರನ್ಗಳಿಸಿ ಆಲೌಟ್ ಆಯಿತು.
IPL 2026 ಹರಾಜಿಗೆ ಭರ್ಜರಿ ಸಿದ್ಧತೆ
ಇನ್ನು ಅಮಿತ್ ಶುಕ್ಲಾ ಅವರ ಈ ಭರ್ಜರಿ ಪ್ರದರ್ಶನ ಇದೀಗ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದೆ. ಈಗಾಗಲೇ ಐಪಿಎಲ್ 2026 ರ ಮಿನಿ-ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಸಮಯದಲ್ಲಿ ಶುಕ್ಲಾ ಪ್ರದರ್ಶನ ಅವರನ್ನು ಫ್ರಾಂಚೈಸಿಗಳ ಫೇವರಿಟ್ ಆಟಗಾರರನ್ನಾಗಿಸಿದೆ.
ಈಗಾಗಲೇ ಅಮಿತ್ ಶುಕ್ಲಾ ರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಆಡಳಿತ ಮಂಡಳಿ ಉತ್ಸುಕತೆ ತೋರಿದ್ದು, ಈ ಸಂಬಂಧ ಮಾತುಕತೆಯಲ್ಲಿ ತೊಡಗಿದೆ ಎನ್ನಲಾಗಿದೆ. ಈಗಾಗಲೇ ರಾಜಸ್ತಾನ ತಂಡ ತನ್ನ ಮುಂಚೂಣಿ ಸ್ಪಿನ್ನರ್ ಗಳಾದ ವನಿಂದು ಹಸರಂಗ ಮತ್ತು ಬೌಲರ್ ಮಹೇಶ ತೀಕ್ಷಣ ಅವರನ್ನು ಬಿಡುಗಡೆ ಮಾಡಿದೆ. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ರವೀಂದ್ರ ಜಡೇಜಾ ರಾಜಸ್ತಾನ ತಂಡಕ್ಕೆ ಆಗಮಿಸಿದ್ದಾರೆ.
Advertisement