IPL 2026: CSK ಸರ್ಫರಾಜ್ ಖಾನ್ ಆಟಕ್ಕೆ RCB ಆಟಗಾರ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್! Video

ಸಿಎಸ್‌ಕೆ ತಂಡ ತನ್ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಾದ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಕಳೆದುಕೊಂಡ ನಂತರ ಸರ್ಫರಾಜ್ ಖಾನ್ ಅಬ್ಬರದ ಅರ್ಧಶತಕ ಗಳಿಸಿದರು.
Sarfaraz Khan - Virat Kohli
ಸರ್ಫರಾಜ್ ಖಾನ್ - ವಿರಾಟ್ ಕೊಹ್ಲಿ
Updated on

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಲ್ಲಿ ಆಡಿರುವ ಮೊದಲ ಮೂರು ಪಂದ್ಯಗಳನ್ನು ಸೋತು ಕರಾಳ ಮತ್ತು ನಿರಾಶಾದಾಯಕ ಆರಂಭವನ್ನು ಪಡೆದಿದೆ. ತಂಡ ಸೋಲು ಕಂಡರೂ ಫ್ರಾಂಚೈಸಿಗಾಗಿ ಉತ್ತಮ ಪ್ರದರ್ಶನ ತೋರಿದ ಆಟಗಾರರೂ ಇದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಯುವ ಆಟಗಾರ ಆಯುಷ್ ಮ್ಹಾತ್ರೆ, ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್ ಖಾನ್ ತಂಡದ ಪರ ಹೋರಾಟ ನೀಡಿದರಾದರೂ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಸರ್ಫರಾಜ್ 25 ಎಸೆತಗಳಲ್ಲಿ ಅದ್ಭುತ 50 ರನ್ ಗಳಿಸಿದರು. ಇವರ ಈ ಆಟಕ್ಕೆ ವಿರಾಟ್ ಕೊಹ್ಲಿ ಕೂಡ ಫಿದಾ ಆಗಿದ್ದು ಕಂಡುಬಂತು.

ಸಿಎಸ್‌ಕೆ ತಂಡ ತನ್ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಾದ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಕಳೆದುಕೊಂಡ ನಂತರ ಸರ್ಫರಾಜ್ ಖಾನ್ ಅಬ್ಬರದ ಅರ್ಧಶತಕ ಗಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅನ್ನು ಅಂತಿಮವಾಗಿ ಸ್ಪಿನ್ನರ್ ಕೃನಾಲ್ ಪಾಂಡ್ಯ ಔಟ್ ಮಾಡಿದರು. ಆದಾಗ್ಯೂ, ಸರ್ಫರಾಜ್ ಸಿಎಸ್‌ಕೆ ಡಗೌಟ್‌ಗೆ ಹಿಂತಿರುಗುತ್ತಿದ್ದಂತೆ, ವಿರಾಟ್ ಕೊಹ್ಲಿ ಅವರಿಗಾಗಿ ಚಪ್ಪಾಳೆ ತಟ್ಟಿದರು ಮತ್ತು ಅವರ ಪ್ರಯತ್ನವನ್ನು ಶ್ಲಾಘಿಸಿದರು.

ಕೊಹ್ಲಿ ಸರ್ಫರಾಜ್ ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿರುವ ವಿಡಿಯೋ ಅಭಿಮಾನಿಗಳ ಹೃದಯ ಗೆದ್ದಿದೆ. ಆರ್‌ಸಿಬಿ ದಿಗ್ಗಜ ಆಟಗಾರ ಎದುರಾಳಿ ತಂಡದಲ್ಲಿದ್ದರೂ ಸಹ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ ಎಂಬುದನ್ನು ಸಾಬೀತುಪಡಿಸಿತು.

ಪಂದ್ಯದ ನಂತರ, ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಕೂಡ ಸರ್ಫರಾಜ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಇತರ ಕೆಲವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು. ಫ್ರಾಂಚೈಸಿ 251 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ 200 ರನ್‌ಗಳ ಗಡಿ ದಾಟಿತು.

Sarfaraz Khan - Virat Kohli
'ಮತ್ತೊಂದು ಅವಕಾಶಕ್ಕೆ ಅರ್ಹ': ಸರ್ಫರಾಜ್ ಖಾನ್ ಪರ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಬ್ಯಾಟಿಂಗ್!

'ನಿಜ ಹೇಳಬೇಕೆಂದರೆ, ನನಗೂ ಆಶ್ಚರ್ಯವಾಯಿತು. ಸರ್ಫರಾಜ್, ಪ್ರಶಾಂತ್ ವೀರ್, ಜೇಮಿ ಓವರ್ಟನ್, ಸ್ವಲ್ಪ ಮಟ್ಟಿಗೆ ಶಿವಂ ದುಬೆ ಕೂಡ ಅದ್ಭುತ ಹೋರಾಟ ನೀಡಿದರು. ಬಹುಶಃ ನಾನು ಅಗ್ರ ಕ್ರಮಾಂಕದಲ್ಲಿ ಹೆಚ್ಚಿನ ಕೊಡುಗೆ ನೀಡಬಹುದಿತ್ತು. ನಾವು ಚೇಸಿಂಗ್ ಮಾಡುತ್ತಿದ್ದೆವು. ಹೀಗಾಗಿ ಅದು ನನ್ನ ಜವಾಬ್ದಾರಿಯಾಗಿದೆ' ಎಂದು ಗಾಯಕ್ವಾಡ್ ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಹೇಳಿದರು.

'ವಿರಾಟ್ ಕೊಹ್ಲಿ ಅವರ ಆರಂಭಿಕ ಅವಕಾಶವನ್ನು ನಾವು ಪಡೆದುಕೊಂಡಿದ್ದರೆ, ಬಹುಶಃ ನಮಗೆ ಮೊಮೆಂಟಮ್ ಸಿಗುತ್ತಿತ್ತು. ಆದರೆ 13, 14ನೇ ಓವರ್‌ಗಳವರೆಗೆ ಆಟ ಇನ್ನೂ ನಮ್ಮ ಕೈಯಲ್ಲಿತ್ತು ಎಂದು ನಾನು ಭಾವಿಸುತ್ತೇನೆ. ನಂತರ ಮೊಮೆಂಟಮ್ ನಿಜವಾಗಿಯೂ ಬದಲಾಯಿತು' ಎಂದು ಅವರು ಹೇಳಿದರು.

ಆರ್‌ಸಿಬಿ ವಿರುದ್ಧದ ಸೋಲು ಸಿಎಸ್‌ಕೆಗೆ ಅನಗತ್ಯ ದಾಖಲೆ ಬರೆಯಿತು. ಚೆನ್ನೈ ಸೂಪರ್ ಕಿಂಗ್ಸ್ (CSK) ಸದ್ಯದ ಐಪಿಎಲ್ ಆವೃತ್ತಿಯನ್ನು ತಮ್ಮ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಸೋಲಿನೊಂದಿಗೆ ಆರಂಭಿಸಿದೆ. ಈ ಸರಣಿ ಸೋಲುಗಳ ನಡುವೆ ಇದು ಅವರ ಎರಡನೇ ಅತಿ ದೊಡ್ಡ ಸೋಲು ಇದಾಗಿದೆ. 2022ನೇ ಆವೃತ್ತಿಯಲ್ಲಿಯೂ ಸಿಎಸ್‌ಕೆ ಆರಂಭದಲ್ಲಿಯೇ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com