'ನಾಯಕನಲ್ಲ ಎಂಬ ವಾಸ್ತವ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ': ವರದಿಗಳನ್ನು ತಳ್ಳಿಹಾಕಿದ ಸೂರ್ಯಕುಮಾರ್ ಯಾದವ್

2026ರಲ್ಲಿ ಭಾರತವನ್ನು ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದರೂ, ಸೂರ್ಯಕುಮಾರ್ ಯಾದವ್ ಅವರನ್ನು ಐರ್ಲೆಂಡ್, ಇಂಗ್ಲೆಂಡ್, ಏಷ್ಯನ್ ಗೇಮ್ಸ್ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗೆ ಕೈಬಿಡಲಾಯಿತು.
Suryakumar Yadav backs Team India, dismisses fake statement circulating online
ಸೂರ್ಯಕುಮಾರ್ ಯಾದವ್
Updated on

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರು ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವನ್ನು ಪೂರ್ಣ ಹೃದಯದಿಂದ ಬೆಂಬಲಿಸುವುದಾಗಿ ಹೇಳಿದ್ದು, ನಾನು ಹೇಳಿರುವುದಾಗಿ ಹರಿದಾಡುತ್ತಿರುವ ಹೇಳಿಕೆಗಳು ಸುಳ್ಳು ಎಂದು ಕರೆದಿದ್ದಾರೆ. ಟಿ20 ವಿಶ್ವಕಪ್ 2026ರ ನಂತರ ಸೂರ್ಯಕುಮಾರ್ ಯಾದವ್ ಅವರನ್ನೇ ನಾಯಕನನ್ನಾಗಿ ಮುಂದುವರಿಸುವುದಾಗಿ ತಂಡದ ಆಯ್ಕೆದಾರರು ಹೇಳಿದ್ದರು. ಆದರೆ, ನಾಯಕತ್ವ ಬದಲಾವಣೆಯಿಂದ ತಮಗೆ ಅಗೌರವ ತೋರಲಾಗಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿರುವುದಾಗಿ ವರದಿಯಾಗಿತ್ತು. ಆದರೆ, ಆ ವರದಿಗಳು ಸುಳ್ಳು ಎಂದ ಅವರು, ಭಾರತೀಯ ತಂಡವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೂರ್ಯಕುಮಾರ್ ಯಾದವ್, 'ತಂಡದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ನಾನು ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ. ಹುಡುಗರು ತಮ್ಮ ಎಲ್ಲವನ್ನೂ ನೀಡುತ್ತಿದ್ದಾರೆಂದು ನನಗೆ ತಿಳಿದಿದೆ ಮತ್ತು ಅವರಿಗೆ ಯಾವಾಗಲೂ ನನ್ನ ಸಂಪೂರ್ಣ ಬೆಂಬಲವಿರುತ್ತದೆ' ಎಂದು ಸೂರ್ಯಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

'ವೈಭವ್ ಅವರಿಗೆ ವಿಶೇಷ ಮಾತು- ನೀವು ಬಹಳ ರೋಮಾಂಚಕಾರಿ ಪ್ರಯಾಣದ ಆರಂಭದಲ್ಲಿ ಇದ್ದೀರಿ. ಪ್ರತಿ ಕ್ಷಣವನ್ನು ಆನಂದಿಸಿ ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಲೇ ಇರಿ' ಎಂದು ಅವರು ಹೇಳಿದರು.

'ನನ್ನ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಹೇಳಿಕೆಗಳು ಪ್ರಸಾರವಾಗುತ್ತಿವೆ. ನಾನು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತಿದ್ದೇನೆ. ಸಾರ್ವಜನಿಕರು ಅಂತಹ ಮಾಹಿತಿಯನ್ನು ನಂಬಬೇಡಿ. ಭಾರತೀಯ ತಂಡ, ತಂಡದ ಸದಸ್ಯರು ಮತ್ತು ಆಟಕ್ಕೆ ನನ್ನ ಬೆಂಬಲವು ಯಾವಾಗಲೂ ಸುಳ್ಳು ಹೇಳಿಕೆಗಳಿಗಿಂತ ಜೋರಾಗಿ ಮಾತನಾಡುತ್ತದೆ' ಎಂದಿದ್ದಾರೆ.

ಸೂರ್ಯಕುಮಾರ್ ಯಾದವ್ ಟಿ20ಐ ಮಾದರಿಯಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದು, 52 ಟಿ20ಐಗಳಲ್ಲಿ 40 ಗೆಲುವುಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ. ಟಿ20ಐಗಳಲ್ಲಿ ಗೆಲುವಿನ 80.76ರಷ್ಟು ಶೇಕಡಾವಾರು ಮತ್ತು ಟಿ20 ವಿಶ್ವಕಪ್‌ನಲ್ಲಿ 88.88% ಗೆಲುವಿನೊಂದಿಗೆ, ಮುಂಬೈ ಬ್ಯಾಟ್ಸ್‌ಮನ್ ತಂಡಕ್ಕೆ ಬ್ಯಾಟ್ಸ್‌ಮನ್ ಆಗಿರುವುದಕ್ಕಿಂತ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಆದಾಗ್ಯೂ, 2026ರಲ್ಲಿ ಭಾರತವನ್ನು ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದರೂ, ಸೂರ್ಯಕುಮಾರ್ ಯಾದವ್ ಅವರನ್ನು ಐರ್ಲೆಂಡ್, ಇಂಗ್ಲೆಂಡ್, ಏಷ್ಯನ್ ಗೇಮ್ಸ್ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗೆ ಕೈಬಿಡಲಾಯಿತು.

ಈ ತಿಂಗಳ ಆರಂಭದಲ್ಲಿ, T20I ನಾಯಕ ಸ್ಥಾನದಿಂದ ಅವರನ್ನು ಕೆಳಗಿಳಿಸಿ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಮಾಡಿದ್ದಕ್ಕೆ ಸೂರ್ಯಕುಮಾರ್ ಯಾದವ್ ಆಯ್ಕೆ ಸಮಿತಿ ಬಗ್ಗೆ ನಿರಾಶೆಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಸ್ಕೈ ಈಗ ಆ ವರದಿಗಳನ್ನು ಸುಳ್ಳು ಎಂದಿದ್ದಾರೆ.

Suryakumar Yadav backs Team India, dismisses fake statement circulating online
'ಇಲ್ಲಿಗೆ ಬರುವ ಮುನ್ನವೇ ಸೂರ್ಯಕುಮಾರ್ ಯಾದವ್ ಸಾಕಷ್ಟು ಮಾಹಿತಿ ನೀಡಿದ್ದರು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್‌

'ನನ್ನ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ನೀಡದಿರುವುದು ನನಗೆ ಯಾವಾಗಲೂ ನೋವುಂಟು ಮಾಡುತ್ತದೆ. ವಿಶ್ವಕಪ್ ಗೆದ್ದ ನಂತರ, ಆಯ್ಕೆದಾರರು ನಾನು ನಾಯಕನಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದರು. ಆದರೆ ಕೊನೆಯ ಕ್ಷಣದಲ್ಲಿ, ನನ್ನ ಹೆಸರು ತಂಡದಲ್ಲಿಲ್ಲ ಎಂದು ನನಗೆ ತಿಳಿದುಬಂತು. ನಾನು ಏನೆಲ್ಲ ಮಾಡಿದ ನಂತರವೂ ನನಗೆ ಅರ್ಹವಾದ ಗೌರವ ಸಿಗಲಿಲ್ಲ. ನನ್ನ ಎಲ್ಲ ಕಠಿಣ ಪರಿಶ್ರಮವನ್ನು ಮರೆತುಹೋದಂತೆ ಭಾಸವಾಯಿತು. ಅವರಿಗೆ ಇನ್ನು ಮುಂದೆ ನನ್ನ ಅಗತ್ಯವಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳದೆ ನನಗೆ ಬೇರೆ ದಾರಿ ಇರಲಿಲ್ಲ' ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾಗಿ ವರದಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com